Advertisement

ಗೋ ಹತ್ಯೆ ನಿಷೇಧಕ್ಕೆ 4 ವಾರಗಳ ತಡೆಯಾಜ್ಞೆ; ಮದ್ರಾಸ್ ಹೈಕೋರ್ಟ್

04:49 PM May 30, 2017 | Team Udayavani |

ಮದುರೈ/ಚೆನ್ನೈ: ವಧೆಗಾಗಿ ಜಾನುವಾರುಗಳನ್ನು ಮಾರುಕಟ್ಟೆಯಲ್ಲಿ ಖರೀದಿಸುವ ಮತ್ತು ಮಾರಾಟ ಮಾಡುವ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಹೇರಿದ್ದ ನಿಷೇಧಕ್ಕೆ ಮದ್ರಾಸ್ ಹೈಕೋರ್ಟ್ ನ ಮದುರೈ ಪೀಠ ಮಂಗಳವಾರ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.

Advertisement

ಮೇ 23ರ ಕೇಂದ್ರ ಸರ್ಕಾರದ ಆದೇಶಕ್ಕೆ ತಡೆ ನೀಡಬೇಕೆಂದು ಕೋರಿ ಸೆಲ್ವಗೋಮತಿ ಹಾಗೂ ಆಶಿಕ್ ಎಲಾಹಿ ಬಾಬಾ ಸಲ್ಲಿಸಿದ್ದ ಪಿಐಎಲ್ ಅರ್ಜಿಯ ವಿಚಾರಣೆ ನಡೆಸಿದ ಮದುರೈ ವಿಭಾಗೀಯ ಪೀಠದ ನ್ಯಾ.ಎಂ.ವಿ.ಮುರಳಿಧರನ್ ಹಾಗೂ ನ್ಯಾ.ಸಿವಿ ಕಾರ್ತಿಕೇಯನ್ ಅವರು ತಾತ್ಕಾಲಿಕ ತಡೆಯಾಜ್ಞೆಯ ಮಧ್ಯಂತರ ಆದೇಶವನ್ನು ನೀಡಿದ್ದಾರೆ.

ಆಹಾರ ಸೇವನೆ ವಿಷಯ ಮನುಷ್ಯನ ವೈಯಕ್ತಿಕ ಹಕ್ಕು. ಹಾಗಾಗಿ ಆಹಾರ ಸೇವನೆ ವಿಷಯದಲ್ಲಿ ಯಾರೊಬ್ಬರೂ ಹೇಳಿಕೊಡಬೇಕಾದ ಯಾವುದೇ ಅಗತ್ಯತೆ ಇಲ್ಲ ಎಂದು ಪಿಐಎಲ್ ನಲ್ಲಿ ವಾದಿಸಲಾಗಿದೆ. ಕೇಂದ್ರ ಸರ್ಕಾರ ವಧೆಗಾಗಿ ಜಾನುವಾರುಗಳನ್ನು ಮಾರುಕಟ್ಟೆಯಲ್ಲಿ ಖರೀದಿಸುವ ಮತ್ತು ಮಾರಾಟ ಮಾಡುವ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ನಿಷೇಧ ಹೇರಿರುವುದು ಸರಿಯಲ್ಲ ಎಂದು ತಿಳಿಸಿದೆ.

ಆದರೆ ಕೇಂದ್ರ ಸರ್ಕಾರದ ಪರ ವಕೀಲರು ಕೇಂದ್ರ ಸರ್ಕಾರ ಜಾನುವಾರ ಮಾರುಕಟ್ಟೆಯಲ್ಲಿನ ಖರೀದಿ ಮತ್ತು ಮಾರಾಟಕ್ಕೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದೆ ಎಂದು ವಾದಿಸಿದರು. ವಾದ, ಪ್ರತಿವಾದ ಆಲಿಸಿದ ಪೀಠ, ತಮಿಳುನಾಡು ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ, ನಾಲ್ಕು ವಾರಗಳೊಳಗೆ ಉತ್ತರ ನೀಡುವಂತೆ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next