Advertisement

ಆರ್‌ ಕೆ ನಗರ ಚುನಾವಣಾ ಫ‌ಲಿತಾಂಶ ರದ್ದು ಕೋರಿದ ಅರ್ಜಿ ವಜಾ

03:19 PM Jan 09, 2018 | Team Udayavani |

ಚೆನ್ನೈ : ಕಳೆದ ತಿಂಗಳಲ್ಲಿ ನಡೆದಿದ್ದ ಆರ್‌ ಕೆ ನಗರ ಉಪ ಚುನಾವಣೆಯ ಫ‌ಲಿತಾಂಶವನ್ನು ರದ್ದು ಮಾಡುವಂತೆ ಭಾರತದ ಚುನಾವಣಾ ಆಯೋಗಕ್ಕೆ ಸೂಕ್ತ ನಿರ್ದೇಶ ನೀಡಬೇಕೆಂದು ಕೋರಿ ಸಲ್ಲಿಸಲಾದ ಮನವಿಯನ್ನು ಮದ್ರಾಸ್‌ ಹೈಕೋರ್ಟ್‌ ಇಂದು ಮಂಗಳವಾರ ವಜಾ ಮಾಡಿದೆ.

Advertisement

ಚುನಾವಣಾ ಫ‌ಲಿತಾಂಶ ಘೋಷಣೆಯಾದ ಬಳಿಕ ಅದನ್ನು ರದ್ದು ಮಾಡುವಂತೆ ಚುನಾವಣಾ ಆಯೋಗವನ್ನು ನ್ಯಾಯಾಲಯ ಕೇಳಿಕೊಳ್ಳುವಂತಿಲ್ಲ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ.

ನನಗರದ ವಕೀಲ ಎಸ್‌ ವಿ ರಾಮ ಮೂರ್ತಿ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ವಜಾ ಮಾಡಿದ ಮುಖ್ಯ ನ್ಯಾಯಾಧೀಶೆ ಇಂದಿರಾ ಬ್ಯಾನರ್ಜಿ ನೇತೃತ್ವದ ಪ್ರಥಮ ಪೀಠವು, ”ಈ ರೀತಿಯ ಪರಿಹಾರಕ್ಕಾಗಿ ಜನತಾ ಪ್ರಾತಿನಿಧ್ಯ ಕಾಯಿದೆಯಡಿ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ” ಎಂದು ಹೇಳಿದರು. 

ಕಳೆದ ಡಿ.24ರಂದು ಪ್ರಕಟವಾಗಿದ್ದ ಆರ್‌ ಕೆ ನಗರ ಉಪ ಚುನಾವಣಾ ಫ‌ಲಿತಾಂಶದಲ್ಲಿ  ಎಐಎಡಿಎಂಕೆಯ ಬದಿಗೊತ್ತಲ್ಪಟ್ಟಿದ್ದ ನಾಯಕ ಟಿ ಟಿ ವಿ ದಿನಕರನ್‌ ಜಯ ಸಾಧಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next