Advertisement

AIADMK ಶಾಸಕರ ಅನರ್ಹತೆ: ಮೂವರು ನ್ಯಾಯಾಧೀಶರ ಪೀಠಕ್ಕೆ

03:24 PM Jun 14, 2018 | udayavani editorial |

ಚೆನ್ನೈ : ಬದಿಗೊತ್ತಲ್ಪಟ್ಟ ಎಐಎಡಿಎಂಕೆ ನಾಯಕ ಟಿಟಿವಿ ದಿನಕರನ್‌ ಅವರಿಗೆ ನಿಷ್ಠೆ ತೋರಿದ 18 ಎಐಎಡಿಎಂಕೆ ಶಾಸಕರ ಅನರ್ಹತೆ ವಿಚಾರದಲ್ಲಿ ಮದ್ರಾಸ್‌ ಹೈಕೋರ್ಟ್‌ ಭಿನ್ನ ಮತದ ತೀರ್ಪು ನೀಡಿರುವ ಕಾರಣ ಈ ವಿಷಯವನ್ನೀಗ ಮೂವರು ನ್ಯಾಯಾಧೀಶರ ಪೀಠದ ತೀರ್ಮಾನಕ್ಕೆ ಇರಿಸಲಾಗಿದೆ.

Advertisement

ಚೀಫ್ ಜಸ್ಟಿಸ್‌ ಇಂದಿರಾ ಬ್ಯಾನರ್ಜಿ ಅವರ ಅನಂತರದ ಅತ್ಯಂತ ಹಿರಿಯ ನಾಯಾಧೀಶರು ಮೂವರು ಸದಸ್ಯರ ಪೀಠದ ನೇತೃತ್ವ ವಹಿಸಲಿದ್ದಾರೆ.

ಮುಖ್ಯ ನ್ಯಾಯಾಧೀಶೆ ಇಂದಿರಾ ಬ್ಯಾನರ್ಜಿ ಅವರು ತಮಿಳು ನಾಡು ಅಸೆಂಬ್ಲಿ ಸ್ಪೀಕರ್‌ ಪಿ ಧನಪಾಲನ್‌ ನಿರ್ಧಾರವನ್ನು ಎತ್ತಿ ಹಿಡಿದರೆ ನ್ಯಾಯಾಧೀಶ ಎಂ ಸುಂದರ್‌ ಅವರು ಧನಪಾಲನ್‌ ಆದೇಶವನ್ನು ವಜಾ ಮಾಡಿದರು. ಪರಿಣಾಮವಾಗಿ ಈ ವಿಷಯದಲ್ಲಿ 1-1ರ ತೀರ್ಪು ವ್ಯಕ್ತವಾಯಿತು. ಹಾಗಾಗಿ ಮೂವರು ನ್ಯಾಯಾಧೀಶರ ಪೀಠದ ಮುಂದೆ ಈ ವಿಷಯವನ್ನು ಮಂಡಿಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next