Advertisement

ಮಡಿಕೇರಿ: ಕಾಲು ಮುರಿದ ಕಾಡಾನೆಗೆ ಚಿಕಿತ್ಸೆ

11:20 AM Jul 30, 2018 | Harsha Rao |

ಮಡಿಕೇರಿ : ಬಲಗಾಲು ಮುರಿದು ಹೋದ ಸ್ಥಿತಿಯಲ್ಲಿ ಕುಶಾಲ ನಗರ ಸಮೀಪ ಕಾಡಾನೆಯೊಂದು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬಂದಿ ಆನೆಗೆ ಚಿಕಿತ್ಸೆ ನೀಡಲು ಕ್ರಮ ಕೈಗೊಂಡಿದ್ದಾರೆ.

Advertisement

ಆನೆಕಾಡು ಮೀಸಲು ಅರಣ್ಯದಲ್ಲಿ ಸುಮಾರು 25 ವರ್ಷ ಪ್ರಾಯದ ಗಂಡಾನೆ ಗಾಯಗೊಂಡು  ಕೆಲವು ದಿನ ಗಳಿಂದ ಯಾತನೆ ಪಡುತ್ತಿದ್ದುದ್ದನ್ನು ಗಮನಿಸಿದ ಕುಶಾಲ ನಗರ ಅರಣ್ಯ ವಲಯ ಅಧಿಕಾರಿ ಸಿ.ಆರ್‌. ಅರುಣ್‌ ಹಾಗೂ ಸಿಬಂದಿ ದುಬಾರೆ ಸಾಕಾನೆ ಶಿಬಿರದ ಸಾಕಾನೆಗಳ ಸಹಾಯದಿಂದ ಅದನ್ನು ಸೆರೆ ಹಿಡಿದು ಆನೆಕಾಡು ಅರಣ್ಯ ಸಿಬಂದಿ ವಸತಿಗೃಹದ ಬಳಿ ಆರೈಕೆ ಮಾಡುತ್ತಿದ್ದಾರೆ. 

ಆನೆಯ ಬಲಗಾಲಿನ ಮೂಳೆ ಮುರಿದಿದೆ. ಭಾರೀ ಮಳೆಯ ನಡುವೆ ಆಹಾರ ಸಿಗದೆ ಆನೆ ನಿತ್ರಾಣವಾಗಿತ್ತು.ಇದೀಗ ಆನೆ ಚಿಕಿತ್ಸೆಗೆ ಸ್ಪಂದಿಸುತ್ತಿದೆ ಎಂದು ವನ್ಯಜೀವಿ ತಜ್ಞ ಡಾ| ಮುಜೀಬ್‌ ತಿಳಿಸಿದ್ದಾರೆ.

ಬೃಹತ್‌ ಗಾತ್ರದ ಮರದ ಬೇರಿ ನೆಡೆಗೆ ಸಿಲುಕಿ ಆನೆಯ ಕಾಲು ಮುರಿದಿರುವ ಸಾಧ್ಯತೆಯಿದೆ ಎಂದು ವಲಯ
ಅರಣ್ಯಾಧಿಕಾರಿ ಸಂಶಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next