Advertisement

Madikeri ನಗದು, ಚಿನ್ನಾಭರಣ, ಸ್ಕೂಟಿ ಕಳ್ಳತನ

11:26 PM Jun 05, 2024 | Team Udayavani |

ಮಡಿಕೇರಿ: ಅಂಗಡಿಯ ಬೀಗ ಮುರಿದು ನಗದು, ಚಿನ್ನಾಭರಣ ಮತ್ತು ಅಂಗಡಿ ಎದುರು ನಿಲ್ಲಿಸಿದ್ದ ಸ್ಕೂಟಿ ಸಹಿತ ಇತರ ವಸ್ತುಗಳನ್ನು ಕಳ್ಳತನ ಮಾಡಿರುವ ಪ್ರಕರಣ ಮಡಿಕೇರಿ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯ ತಾಳತ್ತಮನೆಯಲ್ಲಿ ನಡೆದಿದೆ.

Advertisement

ಸ್ಥಳೀಯ ನಿವಾಸಿ ಭರತ್‌ ಅವರ ಅಂಗಡಿಗೆ ಮಂಗಳವಾರ ರಾತ್ರಿ ನುಗ್ಗಿದ ಕಳ್ಳರು ನಗದು ಸಹಿತ ಅಮೂಲ್ಯ ವಸ್ತುಗಳಿಗೆ ಹುಡುಕಾಟ ನಡೆಸಿ ಕೈಗೆ ಸಿಕ್ಕಿದ್ದನ್ನು ದೋಚಿದ್ದಾರೆ.

ಬುಧವಾರ ಬೆಳಗ್ಗೆ ಅಂಗಡಿಗೆ ಆಗಮಿಸಿದ ಮಾಲಕರಿಗೆ ಸ್ಕೂಟಿ ನಾಪತ್ತೆಯಾಗಿರುವುದು ಗೋಚರಿಸಿದೆ. ಅನಂತರ ಪರಿಶೀಲಿಸಿದಾಗ ಬೀಗ ಮುರಿದು ಅಂಗಡಿಗೆ ನುಗ್ಗಿದ ಕಳ್ಳರು ಕಳ್ಳತನ ಮಾಡಿರುವುದು ಕಂಡು ಬಂದಿದೆ. ಸ್ಕೂಟಿ, 10 ಸಾವಿರ ನಗದು ಮತ್ತು 40 ಗ್ರಾಂ ಚಿನ್ನಾಭರಣ ಕಳುವಾಗಿರುವ ಕುರಿತು ಅಂಗಡಿ ಮಾಲಕ ಭರತ್‌ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಳ್ಳರ ಪತ್ತೆಗಾಗಿ ಕ್ರಮ ಕೈಗೊಂಡಿದ್ದಾರೆ. ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಠಾಣಾ ವೃತ್ತ ನಿರೀಕ್ಷಕ ಉಮೇಶ್‌ ಉಪ್ಪಳಿಕೆ, ಠಾಣಾಧಿಕಾರಿ ಶ್ರೀನಿವಾಸಲು, ಕ್ರೈಂ ಹಾಗೂ ಗ್ರಾಮಾಂತರ ಠಾಣಾ ಗುಪ್ತ ದಳದ ಸಿಬಂದಿ ಭೇಟಿ ನೀಡಿದರು. ಶ್ವಾನ ದಳ, ಬೆರಳಚ್ಚು ಘಟಕ ಹಾಗೂ ವೈಜ್ಞಾನಿಕ ನೆರವು ಘಟಕದ ಸಿಬಂದಿ ಕಳ್ಳರ ಜಾಡು ಪತ್ತೆಗಾಗಿ ಶೋಧ ಕಾರ್ಯ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next