Advertisement

ಬಾಲಕನ ಬೆಳ್ಳಗಾಗಿಸಲು ಕಲ್ಲಿನಿಂದ ಉಜ್ಜಿದಳು!

11:12 AM Apr 03, 2018 | Team Udayavani |

ಭೋಪಾಲ್‌: ಮಹಿಳೆಯೊಬ್ಬರು ಬಾಲಕನ ಬೆಳ್ಳಗಾಗಿಸುವ ಉದ್ದೇಶದಿಂದ ಕಲ್ಲಿನಿಂದ ನಿರಂತರವಾಗಿ ಉಜ್ಜುತ್ತಿದ್ದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಹಿಂಸೆಗೆ ತುತ್ತಾದ ಐದು ವರ್ಷದ ಮಗುವೊಂದನ್ನು ಮಕ್ಕಳ ಸಹಾಯ ಕೇಂದ್ರ ಮತ್ತು ಪೊಲೀಸರು ರಕ್ಷಿಸಿದ್ದಾರೆ. 

Advertisement

ಸುಧಾ ತಿವಾರಿ ಎಂಬ ಮಹಿಳೆ ಒಂದೂವರೆ ವರ್ಷದ ಹಿಂದೆ ಉತ್ತರಾಖಂಡದ ಮಾತೃಛಾಯಾ ಎಂಬ ಸಂಸ್ಥೆಯಿಂದ ಮಗುವನ್ನು ದತ್ತು ಪಡೆದಿದ್ದರು. ಮಗುವಿನ ಚರ್ಮದ ಬಣ್ಣದ ಬಗ್ಗೆ ಆಕೆಗೆ ಅಸಮಾಧಾನ ಇದ್ದು, ಮಗುವನ್ನು ಬೆಳ್ಳಗಾಗಿಸಲು ಕಲ್ಲಿನಿಂದ ಉಜ್ಜಿದ್ದಳು ಎನ್ನಲಾಗಿದೆ. ಈ
ಕುರಿತು ಈಕೆಯ ಸಂಬಂಧಿ ದೂರು ನೀಡಿದ ಹಿನ್ನೆಲೆಯಲ್ಲಿ ಭಾನುವಾರ ಮಕ್ಕಳ ಸಹಾಯ ಕೇಂದ್ರ ಮತ್ತು ಪೊಲೀಸರು ಮಗುವನ್ನು ರಕ್ಷಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next