Advertisement

ಮಧುವನ: ಶೈಕ್ಷಣಿಕ ಪರಿಕರ ವಿತರಣೆ; ದಾನಿಗಳಿಗೆ ಸಮ್ಮಾನ

07:45 AM Jul 21, 2017 | Team Udayavani |

ಕೋಟ: ಮಧುವನ ವಿವೇಕಾನಂದ ಹಿ.ಪ್ರಾ.ಶಾಲೆಗೆ ದಾನಿಗಳಾದ ಶಾಲೆಯ ಹಳೆ ವಿದ್ಯಾರ್ಥಿ, ಉದ್ಯಮಿ ಎ.ಜಯಪ್ರಕಾಶ್‌ ಆರ್‌.ಶೆಟ್ಟಿ ಅವರು ನೀಡಿದ ಸುಮಾರು 40ಸಾವಿರ ರೂ ಮೌಲ್ಯದ ಶೈಕ್ಷಣಿಕ ಪರಿಕರಗಳ ವಿತರಣೆ ಇತ್ತೀಚೆಗೆ ನಡೆಯಿತು.

Advertisement

ಶಾಲಾ ಮುಖ್ಯ ಶಿಕ್ಷಕ ಸುರೇಂದ್ರ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿ, ಜಯಪ್ರಕಾಶ್‌ ಶೆಟ್ಟಿ ಅವರು ತಾನು ಕಲಿತ ಶಾಲೆಯ ಮೇಲಿನ ಪ್ರೀತಿಯಿಂದ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಕೊಡುಗೆಗಳನ್ನು ನೀಡುತ್ತಿದ್ದಾರೆ. ಶಾಲೆಯ ಮೇಲೆ ಇವರಿಗಿರುವ ಅಭಿಮಾನ ಶ್ಲಾಘನೀಯ ಎಂದರು. ಈ ಸಂದರ್ಭ ದಾನಿಗಳನ್ನು ಶಾಲೆಯ ವತಿಯಿಂದ ಸಮ್ಮಾನಿಸಲಾಯಿತು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಶ್ರೀಮತಿ ಶೆಟ್ಟಿಗಾರ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ತಾ.ಪಂ. ಸದಸ್ಯ ಗುಂಡು ಶೆಟ್ಟಿ, ವಡ್ಡರ್ಸೆ ಗ್ರಾ.ಪಂ.ಅಧ್ಯಕ್ಷೆ ಹೇಮಾ, ಊರಿನ ಹಿರಿಯರಾದ ಭಾಸ್ಕರ ಕಿಣಿ ಮಧುವನ, ನಿವೃತ್ತ ಮುಖ್ಯ ಶಿಕ್ಷಕ ಭೋಜ ಶೆಟ್ಟಿ, ಉಪನ್ಯಾಸಕ ಡಾ| ರವಿರಾಜ್‌ ಶೆಟ್ಟಿ, ವಡ್ಡರ್ಸೆ ಗ್ರಾ.ಪಂ.ಸದಸ್ಯ ಕಿರಣ್‌ ಕುಮಾರ್‌, ವಡ್ಡರ್ಸೆ ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರಕಾಶ್‌ ಆಚಾರ್ಯ, ಶಿವರಾಮ ಕೆ.ಎಂ., ಸುರೇಂದ್ರ  ಶೆಟ್ಟಿ ಕೊಮೆ, ವಸಂತ್‌ ಶೆಟ್ಟಿ ಸೂರಿಬೆಟ್ಟು, ನಿವೃತ್ತ ಶಿಕ್ಷಕ ವಿ.ನಾರಾಯಣ ಶೆಟ್ಟಿ, ಬಂಡಾಡಿ ನರಸಿಂಹ ಶೆಟ್ಟಿ, ಮಧುವನ ಯುವಕ ಮಂಡಲದ ಸದಸ್ಯರು, ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next