Advertisement

Madhugiri: ಹಬ್ಬದೂಟ ಸೇವಿಸಿ ಒಂದೇ ಕುಟುಂಬದ ಮೂವರ ಸಾವು

08:31 PM Aug 26, 2024 | Team Udayavani |

ಮಧುಗಿರಿ: ಊರ ಹಬ್ಬಕ್ಕಾಗಿ ಮನೆಯಲ್ಲಿ ಮಾಡಿದ್ದ ಊಟ ಹಾಗೂ ತಂಬಿಟ್ಟು ಸೇವಿಸಿದ ಒಂದೇ ಕುಟುಂಬದ ಇಬ್ಬರು ವೃದ್ಧೆಯರ ಸಹಿತ ಮೂವರು ಮೃತಪಟ್ಟಿರುವ ಘಟನೆ ದೊಡ್ಡೇರಿ ಹೋಬಳಿಯಲ್ಲಿ ಸಂಭವಿಸಿದೆ.

Advertisement

ಬುಳ್ಳಸಂದ್ರ ಗ್ರಾಮದ ತಿಮ್ಮಕ್ಕ (90), ಗಿರಿಯಮ್ಮ (85) ಹಾಗೂ ಸಂಬಂಧಿ ಆಂಧ್ರಪ್ರದೇಶ ಮೂಲದ ಕಾಟಮ್ಮ (45) ಮೃತಪಟ್ಟವರು.

ಊರ ಹಬ್ಬದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮನೆಗಳಲ್ಲಿ ಶನಿವಾರ ಸಿಹಿ ಊಟ ಮಾಡಿದ್ದರು.

ಮನೆಯೊಂದರಲ್ಲಿ ತಯಾರಿಸಿದ್ದ ಉಪ್ಪಿಟ್ಟು-ಕೇಸರಿ ಬಾತ್‌, ತಂಬಿಟ್ಟು ತಯಾರಿಸಿದ್ದರು. ಅದನ್ನು ಸೇವಿಸಿದ 16 ಮಂದಿ ವಾಂತಿ-ಭೇದಿ ಕಾಣಿಸಿಕೊಂಡು ಅಸ್ವಸ್ಥರಾದರು. ತಿಮ್ಮಕ್ಕ ಮತ್ತು ಗಿರಿಯಮ್ಮ ಅಂದೇ ರಾತ್ರಿ ಮೃತಪಟ್ಟಿದ್ದರು. ಸ್ವಗ್ರಾಮಕ್ಕೆ ತೆರಳಿದ ಕಾಟಮ್ಮ ಅಲ್ಲಿ ಮೃತಪಟ್ಟರು. ಗಿರಿಯಮ್ಮಗೆ ಕಿವಿ, ಮೂಗಿನಿಂದ ರಕ್ತಸ್ರಾವವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next