Advertisement

Madhugiri; ಅಕ್ರಮವಾಗಿ ಕಸಾಯಿ ಖಾನೆಗೆ ಸಾಗಿಸುತ್ತಿದ್ದ ಗೋವುಗಳ ರಕ್ಷಣೆ

06:16 PM Nov 18, 2023 | Team Udayavani |

ಮದುಗಿರಿ: ಟಾಟಾ ಎಸಿ ವಾಹನದಲ್ಲಿ ಅಕ್ರಮವಾಗಿ ಅನುಮತಿ ಇಲ್ಲದೆ ಕಸಾಯಿಖಾನೆಗೆ ಸಾಗಿಸುತ್ತಿದ್ದ ಕರುಗಳನ್ನು ರಕ್ಷಣೆ ಮಾಡಿದ್ದು ಗೋಶಾಲೆಗೆ ಕಳಿಸಲಾಗಿದೆ.

Advertisement

ಪಟ್ಟಣದ ಮೂಲಕ ಗೌರಿಬಿದನೂರಿನ ಅಲಿಪುರಕ್ಕೆ ಸಾಗಿಸಲಾಗುತ್ತಿದ್ದ ಕರುಗಳನ್ನು ಹೊಸದುರ್ಗದ ಗವಿರಂಗಪುರದ ಸಂತೆಯಿಂದ ಖರೀದಿಸಿ ತರಲಾಗುತ್ತಿತ್ತು ಎನ್ನಲಾಗಿದ್ದು ಕರುಗಳನ್ನು ತುಂಬಿದ ವಾಹನವನ್ನು ಬೆನ್ನಟ್ಟಿದ ಕನ್ನಡ ರಕ್ಷಣಾ ವೇದಿಕೆಯ ತಾಲೂಕು ಕಾರ್ಯದರ್ಶಿ ರೋಹಿತ್ ಹಾಗೂ ಸ್ನೇಹಿತರಾದ ವಿನಯ್ , ಗಿರೀಶ್, ಪುನೀತ್ , ಮಹೇಂದ್ರ , ಮನು, ನಂದನ್, ಹಾಗೂ ಸ್ನೇಹಿತರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು.

ಸ್ಥಳಕ್ಕೆ ಬಂದ ಪೊಲೀಸರು ವಾಹನವನ್ನು ಜಪ್ತಿ ಮಾಡಿ ಠಾಣೆಗೆ ಕರೆದುಕೊಂಡು ಹೋಗಿದ್ದು, ಕರುಗಳ ಹಾಗೂ ದಾಖಲೆಗಳ ಪರಿಶೀಲನೆ ಮಾಡಿದರು. ಆದರೆ ಸಮರ್ಪಕ ದಾಖಲೆಗಳು ಇಲ್ಲದ ಕಾರಣ 8 ಕರುಗಳ ಪೈಕಿ ಒಂದು ಕೋಣವು ಸೇರಿದ್ದು ಎಲ್ಲವನ್ನು ಮಿಡಿಗೇಶಿ ಹೋಬಳಿಯ ರಾಮದೇವರ ಬೆಟ್ಟದ ಸುರಭಿ ಗೋಶಾಲೆಗೆ ಕಲಿಸಲಾಗುವುದು ಎಂದು ಪಿಎಸ್ಐ ವಿಜಯ್ ಕುಮಾರ್ ತಿಳಿಸಿದ್ದು, ಪ್ರಕರಣ ದಾಖಲಿಸಿಕೊಂಡು ಟಾಟಾ ಎಸಿ ವಾಹನದ ಚಾಲಕನನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next