Advertisement

ಸಿದ್ದರಾಮೋತ್ಸವ –ವಿಶ್ವಾಸದ ವೈಭವೀಕರಣ: ಮಧು ಬಂಗಾರಪ್ಪ

11:59 PM Jul 23, 2022 | Team Udayavani |

ಉಡುಪಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನ್ಮದಿನದ ಅಂಗವಾಗಿ ನಡೆಯುವ ಸಿದ್ದರಾಮೋತ್ಸವು ಒಬ್ಬ ವ್ಯಕ್ತಿಯ ವೈಭವೀಕರಣವಲ್ಲ. ಸಿದ್ದರಾಮಯ್ಯ ಮಾಡಿರುವ ಸಾಧನೆಗಾಗಿ ಅವರ ಅಭಿಮಾನ, ವಿಶ್ವಾಸದ ವೈಭವೀಕರಣ. ಮುಂದಿನ ಚುನಾ ವಣೆಯಲ್ಲಿ ಪಕ್ಷಕ್ಕೆ ಹೆಚ್ಚಿನ ಶಕ್ತಿ, ಒಗ್ಗಟ್ಟು ಹಾಗೂ ವಿಶ್ವಾಸ ನೀಡುವ ಕಾರ್ಯಕ್ರಮ ಇದಾಗಲಿದೆ ಎಂದು ಕಾಂಗ್ರೆಸ್‌ ಮುಖಂಡ ಮಧು ಬಂಗಾರಪ್ಪ ಹೇಳಿದರು.

Advertisement

ಶನಿವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಗಸ್ಟ್‌ 3ರಂದು ನಡೆ ಯುವ ಕಾರ್ಯಕ್ರಮದಲ್ಲಿ ಪಕ್ಷದ ರಾಷ್ಟ್ರೀಯ ಮುಖಂಡರಾದ ರಾಹುಲ್‌ ಗಾಂಧಿ ಸಹಿತ ಅನೇಕರು ಭಾಗವಹಿಸಲಿದ್ದಾರೆ. ಅಭಿಮಾನಿಗಳು ಸೇರಿ ಸಂಘಟನೆಗೆ ಶಕ್ತಿ ತುಂಬಲು ರೂಪಿಸಿರುವ ಈ ಕಾರ್ಯಕ್ರಮವು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರರ ಸಮ್ಮತಿಯಲ್ಲಿ ನಡೆ ಯಲಿದೆ. ರಾಜ್ಯದ ಎಲ್ಲಡೆಯ 10 ಲಕ್ಷಕ್ಕೂ ಅಧಿಕ ಅಭಿಮಾನಿಗಳು ಸೇರುವ ನಿರೀಕ್ಷೆಯಿದೆ ಎಂದರು.

ವೈಯಕ್ತಿಕ ಸಾಮರ್ಥ್ಯ ಇದ್ದರೆ ಯಾರು ಯಾರನ್ನು ಬೇಕಾದರೂ ಉತ್ತರಾಧಿಕಾರಿಯಾಗಿಸಲಿ. ರಾಜಕಾರಣ ಜನ ಸೇವೆಗೋ ಕೊಳ್ಳೆ ಹೊಡೆಯಲೋ ಅಥವಾ ಜೈಲಿಗೆ ಹೋಗಲು ಬರುತ್ತಾರೆಯೋ ಎಂಬುದು ಸ್ಪಷ್ಟವಾಗಿರಬೇಕು ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next