Advertisement

ಹಿಂದುಳಿದ ವರ್ಗದ ಮತ ಒಡೆಯಲು ಈಶ್ವರಪ್ಪಗೆ ಬಿಎಸ್‌ವೈ ಸುಪಾರಿ: ಮಧು ಬಂಗಾರಪ್ಪ

06:20 PM Mar 24, 2024 | Shreeram Nayak |

ಶಿವಮೊಗ್ಗ:ಈಶ್ವರಪ್ಪ ಡಬ್ಬ. ಅದಕ್ಕೆ ಸೌಂಡ್‌ ಮಾಡುತ್ತಿದ್ದಾರೆ. ಅವರು ಅಭ್ಯರ್ಥಿ ಆಗಲ್ಲ. ಯಡಿಯೂರಪ್ಪ, ಅವರ ಮಕ್ಕಳು ಈಶ್ವರಪ್ಪ ಅವರನ್ನು ಡಮ್ಮಿ ಮಾಡಿ ಕೂರಿಸಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ವಾಗ್ಧಾಳಿ ನಡೆಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ ಅವರಿಗೆ ಹಿಂದುಳಿದ ವರ್ಗದ ಮತ ಒಡೆಯಲು ಯಡಿಯೂರಪ್ಪ ಸುಪಾರಿ ಕೊಟ್ಟಿದ್ದಾರೆ. ಜಾತಿ ರಾಜಕಾರಣ ಮಾಡಿ ಇವರು ಹೊಲಸು ಮಾಡಿದ್ದಾರೆ. ಈಶ್ವರಪ್ಪಗೆ ಮಗನಿಗೆ ಟಿಕೆಟ್‌ ಕೊಡಿಸುವ ತಾಕತ್‌ ಇದ್ದರೆ ಅದರ ಬಗ್ಗೆ ಮಾತನಾಡಲಿ. ನಮ್ಮ ಅಕ್ಕ ಒಳ್ಳೆಯ ರೀತಿ ಪ್ರಚಾರ ಮಾಡುತ್ತಿದ್ದಾರೆ. ನಮ್ಮ ತಂಟೆಗೆ ಬಂದರೆ ಮತದಾರರು ಉತ್ತರ ಕೊಡುತ್ತಾರೆ. ಈಶ್ವರಪ್ಪ ಅವರೇ ಗೌರವದಿಂದ ಇರಿ, ಗೌರವ ಉಳಿಸಿಕೊಳ್ಳಿ. ಕಾಂಗ್ರೆಸ್‌ ಬೇರೆಯವರ ಮನೆ ಒಡೆದಿದೆ ಎಂದು ಮತ ಕೇಳಲ್ಲ. ನಮ್ಮ ಗ್ಯಾರಂಟಿ ಯೋಜನೆ ಕೈ ಹಿಡಿಯುತ್ತವೆ. ನಮ್ಮ ಅಭ್ಯರ್ಥಿ ಗೆಲ್ಲುವ ವಿಶ್ವಾಸ ಇದೆ.

ರಾಘವೇಂದ್ರ ಮಾತನಾಡಬೇಕಾದರೆ ಅವರ ತಲೆ ತಾಳ ತಪ್ಪುತ್ತದೆ. ಯಾರ ಕುಟುಂಬದಲ್ಲಿ ಸಿಎಂ ಇದ್ದಾರೆ, ಶಾಸಕ ಇದ್ದಾರೆ, ಮಂತ್ರಿ ಇದ್ದಾರೆ. ಅದಕ್ಕೆ ಕುಟುಂಬ ರಾಜಕಾರಣ ಅಂತಾರೆ ಎಂದಿದ್ದಾರೆ. ಕುಟುಂಬ ರಾಜಕಾರಣಕ್ಕೆ ಯಡಿಯೂರಪ್ಪ ಕುಟುಂಬವೇ ಉದಾಹರಣೆ. ಈ ರಾಜ್ಯದಲ್ಲಿ ಭ್ರಷ್ಟಾಚಾರ ಆರಂಭವಾಗಿದ್ದು ಯಡಿಯೂರಪ್ಪ ಕುಟುಂಬದಿಂದ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next