Advertisement

ಪರಿಸರ ಮಾಹಿತಿ ಕಾರ್ಯಕ್ರಮ

05:58 PM Jun 29, 2020 | Naveen |

ಮಾದನ ಹಿಪ್ಪರಗಿ: ಆಳಂದದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸ್ಥಳೀಯ ಶ್ರೀ ಶಿವಲಿಂಗೇಶ್ವರ ವಿರಕ್ತ ಮಠದ ಪೀಠಾಧಿಪತಿ ಅಭಿನವ ಶಿವಲಿಂಗ ಸ್ವಾಮಿಗಳ ಸಮ್ಮುಖದಲ್ಲಿ ಪರಿಸರ ಮಾಹಿತಿ ಕಾರ್ಯಕ್ರಮ ನಡೆಯಿತು.

Advertisement

ಮಾದನಹಿಪ್ಪರಗಿ ವಲಯದ ಮೇಲ್ವಿಚಾರಕ ಮಂಜುನಾಥ ನಾಯಕರ್‌ ಮಾತನಾಡಿ, ಶ್ರೀ ಕ್ಷೇತ್ರದಿಂದ ವಲಯ ಮಟ್ಟದಲ್ಲಿ ಸ್ವಸಹಾಯ ಸಂಘಗಳ ಸದಸ್ಯರಿಗೆ ಪರಿಸರ ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ತಾಲೂಕು ಕೃಷಿ ಅಧಿಕಾರಿ ಹುಚ್ಚಪ್ಪ ರೆಡ್ಡಿ ಪರಿಸರದ ಬಗ್ಗೆ ಮಾತನಾಡಿದರು.

ಪ್ರಗತಿ ಬಂಧು ಸಂಘಗಳ ಒಕ್ಕೂಟದ ಅಧ್ಯಕ್ಷ ಅಶೋಕ ತೋಳನೂರ, ಮಠದ ಕಾರ್ಯದರ್ಶಿ ಸಿದ್ಧರಾಮ ಅರಳಿಮಾರ, ಸೇವಾ ಪ್ರತಿನಿಧಿಗಳಾದ ಶಿವಲೀಲಾ ಶಾಸ್ತ್ರೀ, ಬನಶಂಕರಿ ಸಿಂಗಸೆಟ್ಟಿ, ಸುನಂದಾ ಕಂಬಾರ, ಸಂತೋಷಿ ಭೂಸನೂರ, ರೇಖಾ ತೋಳನೂರ ಹಾಗೂ ಸ್ವಸಹಾಯ ಸಂಘಗಳ ಸದಸ್ಯರು ಹಾಜರಿದ್ದರು. ನಂತರ ಅಭಿನವ ಶಿವಲಿಂಗ ಸ್ವಾಮಿಗಳಿಂದ ಸದಸ್ಯರಿಗೆ ವಿವಿಧ ತಳಿಯ ಸಸಿ ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next