Advertisement

ವಾಹನ ಅಪಘಾತ ಸಂತ್ರಸ್ತ ತರುಣನಿಗೆ 1 ಕೋಟಿ ರೂ. ಪರಿಹಾರ

04:00 PM Sep 10, 2018 | udayavani editorial |

ಹೊಸದಿಲ್ಲಿ : ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡು ಸಂಪೂರ್ಣ ವಿಕಲಾಂಗನಾಗಿ ಹಾಸಿಗೆಗೆ ಬಿದ್ದಿರುವ 19ರ ಹರೆಯದ ನತದೃಷ್ಟ ತರುಣನಿಗೆ ಮೋಟಾರು ವಾಹನ ಅಪಘಾತ ನ್ಯಾಯಮಂಡಳಿ (ಎಂಎಸಿಟಿ) ಸುಮಾರು 1 ಕೋಟಿ ರೂ. ಪರಿಹಾರವನ್ನು ಮಂಜೂರು ಮಾಡಿದೆ. 

Advertisement

ಅಪಘಾತ ಸಂತ್ರಸ್ತ ತರುಣ, ಹೊಸದಿಲ್ಲಿ ನಿವಾಸಿ, ಜಗಜೋತ್‌ ಸಿಂಗ್‌ಗೆ 97,68,000 ರೂ. ಪರಿಹಾರ ನೀಡುವಂತೆ ಎಂಎಸಿಟಿ ಅಧ್ಯಕ್ಷ ಅಮಿತ್‌ ಬನ್ಸಾಲ್‌ ಅವರು ಆದೇಶ ಹೊರಡಿಸಿದರು. 

ಜಗಜೋತ್‌ ಸಿಂಗ್‌ 2012ರಲ್ಲಿ ಆಜಾದ್‌ಪುರ ಫ್ಲೈಓವರ್‌ ಸಮೀಪ ಮೋಟಾರ್‌ ಸೈಕಲ್‌ನಲ್ಲಿ ಸಾಗುತ್ತಿದ್ದಾಗ ಅತ್ಯಂತ ವೇಗ ಮತ್ತು ನಿರ್ಲಕ್ಷ್ಯದಿಂದ ಧಾವಿಸಿ ಬಂದ ವ್ಯಾನ್‌ ಬಡಿದು ಸಂಭವಿಸಿದ್ದ  ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ದೇಹದ ಮೇಲಿನ ನಿಯಂತ್ರಣವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next