Advertisement

ಮುಕ್ತಾಯದತ್ತ ಧೋನಿ ಅಂ.ರಾ. ಕ್ರಿಕೆಟ್‌?

10:20 AM Aug 16, 2017 | |

ಮುಂಬಯಿ: ಒಂದು ಕಡೆ ಭಾರತ ಸೀಮಿತ ಓವರ್‌ಗಳ ತಂಡದಿಂದ ಯುವರಾಜ್‌ ಸಿಂಗ್‌ ಸ್ಥಾನ ಕಳೆದುಕೊಂಡಿದ್ದಾರೆ. ಈಗ ಮಾಜಿ ನಾಯಕ ಧೋನಿಯೂ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ.

Advertisement

2019ರ ಏಕದಿನ ವಿಶ್ವಕಪ್‌ಗೆ ಭಾರತ ತಂಡವನ್ನು ಸಿದ್ಧಪಡಿಸಲು ಹೊರಟಿರುವ ಬಿಸಿಸಿಐ ಆಯ್ಕೆ ಸಮಿತಿ ಕಠಿನ ನಿರ್ಧಾರಕ್ಕೆ ಸಜ್ಜಾಗಿದೆ, ಒಂದುವೇಳೆ ಧೋನಿ ಉತ್ತಮ ಪ್ರದರ್ಶನ ನೀಡದಿದ್ದರೆ ತಂಡದಲ್ಲಿ ಸ್ಥಾನ ಕಳೆದು ಕೊಳ್ಳಬೇಕಾದ ಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಮೂಲಗಳು ಹೇಳಿವೆ.ಇತ್ತೀಚೆಗೆ ಶ್ರೀಲಂಕಾದಲ್ಲಿನ ಸೀಮಿತ ಓವರ್‌ಗಳ ಸರಣಿಗೆ ಭಾರತ ತಂಡ ಆಯ್ಕೆ ಮಾಡಿದ ಅನಂತರ ಹೇಳಿಕೆ ನೀಡಿದ್ದ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್‌.ಕೆ. ಪ್ರಸಾದ್‌, ಧೋನಿ ಉತ್ತಮವಾಗಿ ಆಡದಿದ್ದರೆ ನಾವು ಬೇರೆ ಆಯ್ಕೆಯತ್ತ ನೋಡಬೇಕಾಗುತ್ತದೆ ಎಂದಿದ್ದರು. ಇದು ಧೋನಿ ಭವಿಷ್ಯ ಡೋಲಾಯಮಾನವಾಗಿರುವ ಸ್ಪಷ್ಟ ಸೂಚನೆ.

Advertisement

Udayavani is now on Telegram. Click here to join our channel and stay updated with the latest news.

Next