Advertisement

ಪಾಂಡಿಚೇರಿ ಸರ್ಕಾರದ ಕೆಲಸದಲ್ಲಿ ಬೇಡಿ ಮಧ್ಯಪ್ರವೇಶಿಸುವಂತಿಲ್ಲ; ಮದ್ರಾಸ್ ಹೈಕೋರ್ಟ್

08:33 AM May 01, 2019 | Nagendra Trasi |

ಚೆನ್ನೈ: ಕೇಂದ್ರಾಡಳಿತ ಪ್ರದೇಶವಾದ ಪಾಂಡಿಚೇರಿ ಸರ್ಕಾರದ ದಿನಂಪ್ರತಿ ಆಡಳಿತದಲ್ಲಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರು ಮಧ್ಯಪ್ರವೇಶಿಸಬಾರದು ಎಂದು ಮದ್ರಾಸ್ ಹೈಕೋರ್ಟ್ ಮಂಗಳವಾರ ತಾಕೀತು ಮಾಡಿದೆ.

Advertisement

ಕಿರಣ್ ಬೇಡಿಯವರಿಗೆ ಫೈಲ್ಸ್ ಗಳನ್ನು ತರಿಸಿಕೊಂಡು, ಅಧಿಕಾರಿಗಳಿಗೆ ಆದೇಶ ನೀಡುವ ಅಧಿಕಾರ ಇಲ್ಲ ಎಂದು ಕೋರ್ಟ್ ಹೇಳಿರುವುದಾಗಿ ನ್ಯೂಸ್ ಏಜೆನ್ಸಿ ಐಎಎನ್ ಎಸ್ ವರದಿ ಮಾಡಿದೆ.

2016ರಿಂದ ಕಿರಣ್ ಬೇಡಿ ಅವರು ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡ ನಂತರ ಪಾಂಡಿಚೇರಿ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ಅವರೊಡನೆ ಜಟಾಪಟಿ ನಡೆಯುತ್ತಲೇ ಇದೆ. ಪಾಂಡಿಚೇರಿ ಸರ್ಕಾರದ ಸಚಿವರ ದಿನಂಪ್ರತಿ ಕಾರ್ಯದಲ್ಲಿ ಪದೇ, ಪದೇ ಮೂಗು ತೂರಿಸುತ್ತಿರುವ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರ ಅಧಿಕಾರವನ್ನು ಪ್ರಶ್ನಿಸಿ ಪಾಂಡಿಚೇರಿ ಕಾಂಗ್ರೆಸ್ ಶಾಸಕ ಲಕ್ಷ್ಮಿನಾರಾಯಣನ್ ಅವರು 2017ರಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next