Advertisement

ಮಂಡ್ಯ : ಶಿವರಾಮೇ ಗೌಡರಿಗೆ ಜೆಡಿಎಸ್‌ ಟಿಕೆಟ್‌ ; ಲಕ್ಷ್ಮೀ ಕಣ್ಣೀರು !

05:32 PM Oct 14, 2018 | Team Udayavani |

ಮಂಡ್ಯ : ಜೆಡಿಎಸ್‌ ಕೊನೆಗೂ ಮಂಡ್ಯ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಅಭ್ಯರ್ಥಿಯನ್ನು ಅಂತಿಮಗೊಳಿಸಿದ್ದು, ಎಲ್‌.ಆರ್‌.ಶಿವರಾಮೇಗೌಡ ಅವರಿಗೆ ಟಿಕೆಟ್‌ ನೀಡಿದೆ. 

Advertisement

ಟಿಕೆಟ್‌ ಪಡೆಯುವ ಭಾರೀ ನಿರೀಕ್ಷೆ ಇರಿಸಿಕೊಂಡಿದ್ದ  ಲಕ್ಷ್ಮೀ ಅಶ್ವಿ‌ನ್‌ ಗೌಡ ಅವರು ತೀವ್ರ ನಿರಾಶರಾಗಿದ್ದಾರೆ. ಟಿಕೆಟ್‌ ಸಿಗುವುದಿಲ್ಲ ಎಂದು ತಿಳಿದ ಬಳಿಕ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರ ನಿವಾಸದಿಂದ ಕಣ್ಣೀರಿಡುತ್ತಲೆ ಹೊರ ಬಂದಿದ್ದಾರೆ. 

ಪ್ರತಾಪ್‌ ಸಿಂಹ ಲೇವಡಿ 
ಲಕ್ಷ್ಮಿ ಅಶ್ವಿ‌ನ್‌ ಗೌಡ ಅವರಿಗೆ ಟಿಕೆಟ್‌ ನೀಡದೆ ಇರುವುದಕ್ಕೆ ಬಿಜೆಪಿ ಸಂಸದ ಪ್ರತಾಪ್‌ ಸಿಂಹ ಅವರು ಲೇವಡಿ ಮಾಡಿದ್ದು  ಕಾಂಗ್ರೆಸ್‌-ಜೆಡಿಎಸ್‌ ನಂಬಿದ ಜನರಿಗೇ ಏನೂ ಸಿಗುವುದಿಲ್ಲ ಇನ್ನು ಮುಖಂಡರಿಗೆ ಸಿಗುತ್ತದಾ ಎಂದರು. ಈ ಬಾರಿ ಮಂಡ್ಯದಲ್ಲಿ ಬಿಜೆಪಿ ಗೆಲ್ಲುವುದು ಖಚಿತ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next