Advertisement

Love Matter: ಪ್ರಿಯಕರನ ಮನೆ ಮುಂದೆ ಮಹಿಳೆ ಧರಣಿ

05:49 PM Oct 09, 2023 | Team Udayavani |

ಚಿಂತಾಮಣಿ: ಮದುವೆಯಾಗುವುದಾಗಿ ನಂಬಿಸಿ 2 ವರ್ಷಗಳ ಕಾಲ ಪ್ರೀತಿಸಿದ ಯುವಕನೊಬ್ಬ ತನ್ನನ್ನು ಮದುವೆ ಯಾಗದೇ ಮೋಸ ಮಾಡಿದ್ದಾನೆಂದು ಆರೋಪಿಸಿ, ಮೋಸ ಹೋದ ಮಹಿಳೆ ಪ್ರಿಯಕರ ಮನೆ ಮುಂದೆ ಧರಣಿ ನಡೆಸುತ್ತಿರುವ ಘಟನೆ ತಾಲೂಕಿನ ನಂದಿಗಾನಹಳ್ಳಿ ಗ್ರಾಪಂ ವ್ಯಾಪ್ತಿಯ ಮುದ್ದಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.

Advertisement

ಮೋಸ ಮಾಡಿದ ಯುವಕನನ್ನು ಅದೇ ಗ್ರಾಮದ ಶ್ರೀನಿವಾಸ್‌ ಎಂಬುವರ ಪುತ್ರ ವಂಶಿ ಎಂದು ಗುರುತಿಸಲಾಗಿದ್ದು, ಮೋಸ ಹೋದ ಯುವತಿಯನ್ನು ಗ್ರಾಮದ ನಾಗೇಶ್‌ ಎಂಬುವರ ಪುತ್ರಿ ಸ್ವಾತಿ ಎಂದು ಗುರುತಿಸಲಾಗಿದೆ. ಇಬ್ಬರು ಒಂದೇ ಗ್ರಾಮದವರಾಗಿದ್ದು ಸ್ವಾತಿ ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಮುಗಿಸಿದ್ದಾಳೆ. ವಂಶಿ ಚಾಲಕನ ಕೆಲಸ ಮಾಡುತ್ತಿದ್ದನು. ಕಳೆದ ಎರಡು ವರ್ಷಗಳಿಂದ ಗಾಢವಾದ ಪ್ರೀತಿಯಲ್ಲಿದ್ದರು. ಸ್ವಾತಿ ಮನೆಯಲ್ಲಿ ಮದುವೆಗೆ ತಯಾರಿ ನಡೆಸುತ್ತಿರುವ ವಿಚಾರವನ್ನು ತಿಳಿಸಿದ ಯುವತಿ, ನನ್ನನ್ನು ಮದುವೆ ಮಾಡಿಕೋ ಎಂದು ಯುವಕನಿಗೆ ತಿಳಿಸಿದ್ದಾರೆ.

ನೀನು ಈಗ ಬೇರೆಯವರನ್ನು ಮದುವೆ ಮಾಡಿಕೋ ನಂತರ ನಾನು ನಿನ್ನನ್ನು ಕರೆದುಕೊಂಡು ಬರುತ್ತೇನೆ. ಎಲ್ಲಿಯಾದರೂ ಹೋಗಿ ಜೀವನ ಸಾಗಿಸುವುದಾಗಿ ಯುವಕ ಹೇಳಿದ್ದನಂತೆ. ಅದರಂತೆ ಬೇರೊಬ್ಬರ ಜತೆ ಸ್ವಾತಿ ಮದುವೆಯಾಗಿ ಈಗ ಎರಡು ದಿನಗಳ ನಂತರ ಗಂಡನನ್ನು ಬಿಟ್ಟು ಹುಟ್ಟೂರಿಗೆ ಬಂದು ಮದುವೆ ಮಾಡಿಕೊಳ್ಳುವಂತೆ ಪ್ರೀಯಕರ ಬೆನ್ನು ಬಿದ್ದಿದ್ದಾಳೆ. ಆದರೆ, ಯುವಕನ ಪೋಷಕರು ಹುಡಗಿ ಕೆಳ ಜಾತಿ ಎಂಬ ವಿಚಾರಕ್ಕೆ ಮದುವೆಗೆ ಮಾಡಿಕೊಳ್ಳಲು ಒಪ್ಪುತ್ತಿಲ್ಲಾ ಎಂದು ಆರೋಪಿಸಿ, ಪ್ರೀಯಕರನ ಮನೆಯ ಮುಂದೆಯೇ ವಿವಾಹಿತ ಮಹಿಳೆ ಪ್ರತಿಭಟನೆಗೆ ಮುಂದಾಗಿದ್ದಾಳೆ.

Advertisement

Udayavani is now on Telegram. Click here to join our channel and stay updated with the latest news.

Next