Advertisement

ಯುವತಿ ಬೇರೆ ಯುವಕನನ್ನು ಮದುವೆಯಾಗಿದ್ದಕ್ಕೆ ಆಕೆಯ ಪತಿಯನ್ನು ಅಟ್ಟಾಡಿಸಿ ಕೊಂದ ಪ್ರೇಮಿ!

01:07 PM Sep 04, 2022 | Team Udayavani |

ಬೆಂಗಳೂರು: ಪ್ರೀತಿಸಿದ ಯುವತಿ ಮದುವೆಯಾಗಿದ್ದ ಫ್ಲವರ್‌ ಡೆಕೋರೆಟರ್‌ನನ್ನು ಪಾಗಲ್‌ ಪ್ರೇಮಿಯೊಬ್ಬ ನಡು ರಸ್ತೆಯಲ್ಲಿ ಕೊಲೆಗೈದಿರುವ ಘಟನೆ ಬೈಯಪ್ಪನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಗಜಾನನ ನಗರ ನಿವಾಸಿ ಸತೀಶ್‌(24) ಕೊಲೆಯಾದ ಯುವಕ. ಈ ಸಂಬಂಧ ರಾಕೇಶ್‌ ಹಾಗೂ ಇತರರನ್ನು ವಶಕ್ಕೆ ಪಡೆಯಲಾಗಿದೆ.

ಸತೀಶ್‌ ಮದುವೆ ಸಮಾರಂಭ ಹಾಗೂ ಇತರೆ ಶುಭ ಕಾರ್ಯಗಳಿಗೆ ಫ್ಲವರ್‌ ಡೆಕೋರೆಟ್‌ ಕೆಲಸ ಮಾಡುತ್ತಿದ್ದರು. ಒಂದೂವರೆ ತಿಂಗಳ ಹಿಂದಷ್ಟೇ ಯುವತಿಯೊಬ್ಬಳನ್ನು ಮದುವೆಯಾಗಿದ್ದ. ಆದರೆ, ಆಕೆಯನ್ನು ಆರೋಪಿ ರಾಕೇಶ್‌ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದ. ಈ ವಿಚಾರ ಗೊತ್ತಿದ್ದರೂ ಸತೀಶ್‌, ಯುವತಿಯನ್ನು ಮದುವೆಯಾಗಿದ್ದ ಎಂದು ಹೇಳಲಾಗಿದೆ.

ಇದನ್ನೂ ಓದಿ: ನೇಣು ಬಿಗಿದ ಸ್ಥಿತಿಯಲ್ಲಿ 14 ವರ್ಷದ ಬಾಲಕಿಯ ಶವ ಪತ್ತೆ : ಬೆಚ್ಚಿ ಬೀಳಿಸಿತು ವೈದ್ಯಕೀಯ ವರದಿ

ಅದೇ ವಿಚಾರಕ್ಕೆ ಸತೀಶ್‌ ಮತ್ತು ರಾಕೇಶ್‌ ನಡುವೆ ಈ ಹಿಂದೆ ಗಲಾಟೆಯಾಗಿತ್ತು. ಆಗ ಸತೀಶ್‌, ಇದೀಗ ಆಕೆ “ನನ್ನ ಹೆಂಡತಿ’. ಎಲ್ಲ ಮರೆಯುವಂತೆ ಎಚ್ಚರಿಕೆ ನೀಡಿದ್ದ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ರಾಕೇಶ್‌ ಮತ್ತು ಆತನ ಮೂವರು ಸಹಚರರು, ಶುಕ್ರವಾರ ರಾತ್ರಿ 9.30ರ ಸುಮಾರಿಗೆ ಸತೀಶ್‌ ಕೆಲಸ ಮುಗಿಸಿಕೊಂಡು ಬೈಕ್‌ನಲ್ಲಿ ಬೈಯಪ್ಪನಹಳ್ಳಿಯ ಮೇಲುಸೇತುವೆ ಕೆಳಗಡೆ ಹೋಗುತ್ತಿದ್ದ. ಅದೇ ವೇಳೆ ಅಲ್ಲಿಯೇ ಅಡಗಿದ್ದ ರಾಕೇಶ್‌ ಮತ್ತು ಆತನ ಮೂವರು ಸಹಚರರು ಸತೀಶ್‌ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ. ಆರೋಪಿಗಳನ್ನು ತಳ್ಳಿ ಸತೀಶ್‌ ತಪ್ಪಿಸಿಕೊಂಡು ಓಡಿದಿದ್ದಾನೆ.

Advertisement

ಆದರೂ ಬಿಡದ ಆರೋಪಿಗಳು ಅಟ್ಟಾಡಿಸಿ ಸತೀಶ್‌ನ ಎದೆ, ಕುತ್ತಿಗೆ ಹಾಗೂ ಇತರೆ ಭಾಗಕ್ಕೆ ಇರಿದು ಕೊಲೆಗೈದಿದ್ದಾರೆ. ಘಟನೆ ಸಂಬಂಧ ರಾಕೇಶ್‌ ಹಾಗೂ ಇತರರನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೆ, ಸತೀಶ್‌ ಪತ್ನಿ ವಿಚಾರಣೆಯನ್ನು ನಡೆಸಲಾಗುತ್ತದೆ ಎಂದು ಪೊಲೀಸರು ಹೇಳಿದರು.

ಬೈಯಪ್ಪನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Advertisement

Udayavani is now on Telegram. Click here to join our channel and stay updated with the latest news.

Next