Advertisement

ಲವ್ ಜಿಹಾದ್ ಅಂತಾರಲ್ಲ… ಯೋಗಿ ಆದಿತ್ಯನಾಥ್ ಮದುವೆ ಆಗಿದ್ದಾನಾ ?: ಸಿ.ಎಂ ಇಬ್ರಾಹಿಂ

01:29 PM Jan 06, 2021 | Team Udayavani |

ಬೆಂಗಳೂರು: ಲವ್ ಜಿಹಾದ್ ಬಗ್ಗೆ ಮಾತನಾಡುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಲವ್ ಅಂದರೆ ಏನು ಅಂತ ಗೊತ್ತಿದ್ಯಾ? ಅವರಿಗೆ ಮದುವೆ ಆಗಿದ್ಯಾ? ಯೋಗಿ ಆದಿತ್ಯನಾಥ್ ಮದುವೆ ಆಗಿದ್ದಾನಾ? ಅವನಿಗೆ ಹೆಂಡತಿ, ಮಕ್ಕಳ ಬಗ್ಗೆ ಅರಿವಿದೆಯಾ? ಪ್ರೀತಿ, ಸಂಸಾರದ ಬಗ್ಗೆ ಏನೂ ಅನುಭವ ಇಲ್ಲದ ಅವರು ಲವ್ ಜಿಹಾದ್ ಬಗ್ಗೆ ಮಾತಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಪರಿಷತ್ ಸದಸ್ಯ  ಸಿ.ಎಂ ಇಬ್ರಾಹಿಂ ಹೇಳಿಕೆ ನೀಡಿದ್ದಾರೆ.

Advertisement

ಶಾಸಕರ ಭವನದಲ್ಲಿ ಮಾತನಾಡಿದ ಅವರು, ಮೊದಲಿನಿಂದಲೂ ಹೇಳುತ್ತಿದ್ದೇನೆ. ನಾನು ಏನೋ ಆಗಬೇಕು ಎಂದು ಹೋಗುತ್ತಿಲ್ಲ. ರಾಜ್ಯಕ್ಕೆ ಮತ್ತು ದೇಶಕ್ಕೆ ಏನಾದರೂ ಒಳಿತು ಮಾಡಬೇಕೆಂದು   ಹೋಗುತ್ತಿದ್ದೇನೆ. ಲಕ್ಷಾಂತರ ರೈತರು ಚಳಿ-ಗಾಳಿ ಲೆಕ್ಕಿಸದೇ ಹೋರಾಟ ಮಾಡುತ್ತಿದ್ದಾರೆ.  ರಾಜ್ಯದಲ್ಲೂ ಅದೇ ಪರಿಸ್ಥಿತಿ ನಿರ್ಮಾಣ ಆಗುತ್ತದೆ.

ನಾನು ಈಗಾಗಲೇ ಏಳು ಜಿಲ್ಲೆಗೆ ಭೇಟಿ ನೀಡಲಿದ್ದೇನೆ. ಕೇವಲ ರಾಜ್ಯ ಅಲ್ಲ,  ಬಿಹಾರದ ತೇಜಸ್ವಿಯಾದವ್, ನಿತೀಶ್ ಕುಮಾರ್, ಶರದ್ ಯಾದವ್ ರನ್ನು ಕೂಡ ಭೇಟಿಯಾಗಿದ್ದೇನೆ.  ಜನತಾ ಪರಿವಾರವನ್ನ ಒಂದು ಮಾಡಬೇಕು ಅನ್ನೋದು ಮೂಲ ಉದ್ದೇಶ  ಹೊಂದಿದ್ದೇನೆ. ಯಡಿಯೂರಪ್ಪ ಸರ್ಕಾರ  ಸಂಪೂರ್ಣ ವಿಫಲವಾಗಿದೆ. ನಮ್ ಟ್ರೈನ್ ಇನ್ನೂ ಶುರುವಾಗಿಲ್ಲ, ಶುರುವಾದ ಮೇಲೆ ಎಲ್ಲರು ಹತ್ತಿಕೊಳ್ತಾರೆ. ನಾವು ಸಾಬ್ರು, ಹೊಸ ಗಾಡಿ ತಗೊಳಲ್ಲ, ಹಳೇ ಗಾಡಿನೇ ರೆಡಿ ಮಾಡ್ತಿವಿ.

ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಟ್ರಕ್ ಚಾಲನೆ- ಅಪಘಾತ; ಮೂವರು ಬೈಕ್ ಸವಾರರು ಸಾವು, ಹಲವರು ಗಂಭೀರ

ಜೆಡಿಎಸ್ ಹೋಗಿ ಏನಾಗಬೇಕು ಎಂದು ಹೋಗುತ್ತಿಲ್ಲ.  ದೇವರ ಅನುಗ್ರಹದಿಂದ ನಾನು ಯಾವುದೇ ಕೆಲಸಕ್ಕೆ ಕೈ ಹಾಕಿದ್ರು ವಿಫಲವಾಗಿಲ್ಲ. ನನ್ನ ಮನಸ್ಸು ಸರಿ ಇರುವುದರಿಂದ ಸದ್ಬುದ್ದಿ ಕೊಡುತ್ತಿದ್ದಾನೆ. ಮನಸ್ಸು ಕೆಟ್ಟದಾಗಿದ್ದಾಗ ಮಾತ್ರ ದುರ್ಬುದ್ದಿ ಕೊಡುತ್ತಾನೆ.

Advertisement

ಕಮಾಲ್ ಮಾಡೋ ಹೆಸರೇ ಸಿಎಂ ಇಬ್ರಾಹಿಂ ಎಂದ ಅವರು, ಪ್ರಭಾಕರ್ ಕೋರೆ ಮತ್ತು ಉಮೇಶ್ ಕತ್ತಿ ನನ್ನನ್ನು ಭೇಟಿಯಾಗಿದ್ದರು.  ಯಾಕೆ ಎಂದು  ಹೇಳಲು ಆಗುವುದಿಲ್ಲ.  ನಾನು ಇಂದು ದೇವೇಗೌಡರನ್ನು ಭೇಟಿಯಾಗುತ್ತೇನೆ.  ಅವರ  ಜೊತೆ ಈ ಎಲ್ಲಾ ವಿಚಾರದ ಬಗ್ಗೆ ಮಾತನಾಡುತ್ತೇನೆ. ಅವರು ಕನ್ನಡದ ಮೇರು ವ್ಯಕ್ತಿತ್ವ,  ನಾವು ಹೆಮ್ಮೆ ಪಡಬೇಕು ಎಂದು ತಿಳಿಸಿದರು.

ಇದನ್ನೂ ಓದಿ:  ಲವ್ ಜಿಹಾದ್ ಕಾಯ್ದೆ ಜಾರಿ ನಿಶ್ಚಿತ, ಯಾವುದೇ ಕಾರಣಕ್ಕೂ ಹಿಂಜರಿಕೆ ಇಲ್ಲ : ಶ್ರೀಮಂತ ಪಾಟೀಲ್

Advertisement

Udayavani is now on Telegram. Click here to join our channel and stay updated with the latest news.

Next