Advertisement

Love Jihad; ಮಗಳನ್ನು ನಟೋರಿಯಸ್ ನಿಂದ ರಕ್ಷಿಸಿ: ಕಣ್ಣೀರು ಹಾಕಿದ ತಂದೆ

06:11 PM Jul 11, 2024 | Team Udayavani |

ಮಂಗಳೂರು: ಲವ್ ಜಿಹಾದ್ ಗೆ ಬಲಿಯಾದ ಹಿಂದೂ ಹುಡುಗಿಯ ತಂದೆ ವಿನೋದ್ ತನ್ನ ಮಗಳನ್ನು ನಟೋರಿಯಸ್ ಕ್ರಿಮಿನಲ್ ಮುಹಮ್ಮದ್‌ ಅಶ್ಫಾಕ್‌ ನಿಂದ ರಕ್ಷಿಸುವಂತೆ ಮಾಧ್ಯಮ ಪ್ರತಿನಿಧಿಗಳ ಮುಂದೆ ಗುರುವಾರ ಕಣ್ಣೀರು ಹಾಕಿದ್ದಾರೆ.

Advertisement

ಮುಹಮ್ಮದ್‌ ಅಶ್ಫಾಕ್‌ ನಿಂದ ಯುವತಿಯ‌ ಅಪಹರಣ ಪ್ರಕರಣಕ್ಕೆ‌ ಸಂಬಂಧಿಸಿದಂತೆ ಯುವತಿಯ ತಂದೆ ವಿನೋದ್ ಕುಮಾರ್ ಅವರು ಮಾಧ್ಯಮದವರ ಜತೆ ಮಾತನಾಡಿ, ನಾನು ಅಲ್ಲಿನ ಜಮಾತ್ ಹೋಗಿ, ನನ್ನ ಮಗಳನ್ನು ಆತನಿಂದ ರಕ್ಷಿಸಿ ಕೊಡುವಂತೆ ಮನವಿ ಮಾಡುತ್ತೇನೆ ಎಂದು ಕಣ್ಣೀರು ಹಾಕಿದ್ದಾರೆ.

ಜೂ.6 ರಂದು ಅವಳು ಅಶ್ಫಾಕ್ ಜತೆ ಆಕೆಗೆ ಪ್ರೇಮ‌ ಇರುವುದು ಗೊತ್ತಾಯಿತು. ಅದಕ್ಕಾಗಿ ಬುದ್ದಿ ಹೇಳಿ ಉಳ್ಳಾಲದ‌ ಸಂಬಂಧಿಕರ ಮನೆಗೆ ಕಳುಹಿಸಿದ್ದೆವು. ಅದರೆ ಅತ ಅಲ್ಲಿಗೂ ಬಂದು ಜೂ.30 ರಂದು ಆಕೆಯನ್ನು ಅಪಹರಣ ಮಾಡಿದ್ದಾನೆ. ಮಗಳನ್ನು ಕರೆತರಲು ಸಾಕಷ್ಟು ಪ್ರಯತ್ನ ಮಾಡಿದರೂ ಸಾಧ್ಯವಾಗಿಲ್ಲ. ಕರ್ನಾಟಕ ಸರ್ಕಾರ, ಮಂಗಳೂರು ಪೊಲೀಸರು ನನಗೆ ಸಹಾಯ ಮಾಡಬೇಕು ಎಂದು ಮನವಿ ಮಾಡಿದರು.

ಪಾಂಡೇಶ್ವರದ ಶ್ರೀನಿವಾಸ ಕಾಲೇಜಿನಲ್ಲಿ ಮಗಳು ಬಿಸಿಎ ಓದುತ್ತಿದ್ದಳು. ಆದರೆ ದ್ವಿತೀಯ ವರ್ಷದ ಡಿಗ್ರಿಗೆ ಶುಲ್ಕ ಕಟ್ಟುವುದಕ್ಕೆ ಹಣ ಇರಲಿಲ್ಲ. ಹಾಗಾಗಿ ಅವಳು ಶಿಕ್ಷಣ ಮೊಟಕುಗೊಳಿಸಿದ್ದಳು. ಬಳಿಕ ಎರಡು ತಿಂಗಳು ಕಾಸರಗೋಡಿ ನಲ್ಲಿ ಕೆಲಸ ಮಾಡುತ್ತಿದ್ದಳು. ಈ ವೇಳೆ ಮಹಮ್ಮದ್ ಅಶ್ಫಾಕ್ ನ ಪರಿಚಯ ಆಗಿರಬೇಕು‌ ಎಂದು ಅವರು ತಿಳಿಸಿದರು.

Advertisement

ಆಶ್ಪಾಕ್ ನನ್ನ ಮಗನಿಗೆ‌ ‌ಕರೆ ಮಾಡಿ ಮಗಳನ್ನು ಕರೆದು ಕೊಂಡು ಓಡಿ ಹೋಗಿರುವುದಾಗಿ ಹೇಳಿದ್ದಾನೆ.‌ ಊರವರು ಹೇಳುವ ಪ್ರಕಾರ ಆತನಿಗೆ ಈಗಾಗಲೇ ಎರಡು ಮದುವೆಯಾಗಿದೆ. ಆತನ‌ ಮೇಲೆ ಹದಿನಾರಕ್ಕೂ ಹೆಚ್ಚು‌ ಕೇಸ್ ಗಳಿವೆ. ಪೊಲೀಸರು ಆತನನ್ನು ಬಂಧಿಸಿ, ಕಠಿನ ಕ್ರಮ‌ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next