Advertisement

ಕಾಂಗ್ರೆಸ್ ನಲ್ಲಿ ಅಪ್ಪು…ಪಪ್ಪು ಅಷ್ಟೇ ಇರುವುದು: ಆರ್.ಅಶೋಕ್

03:58 PM Apr 22, 2022 | Team Udayavani |

ಬೆಂಗಳೂರು: ಚುನಾವಣೆಗೆ ಒಂದು ವರ್ಷ ಇದೆ. ಆದರೆ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಇವರಲ್ಲಿ ನಾಯಕರು ಯಾರು ಎಂಬ   ಪ್ರಶ್ನೆ ಬಗೆಹರಿಯುತ್ತಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ವ್ಯಂಗ್ಯವಾಡಿದರು.

Advertisement

ದೇವನಹಳ್ಳಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಮೂರು ಅಥವಾ ನಾಲ್ಕು ತಿಂಗಳು ಇದ್ದಾಗ ಈ ಹಿಂದೆ ಚುನಾವಣೆ ಪ್ರಚಾರ ನಡೆಸುತ್ತಿದ್ದರು. ಮೋದಿ‌, ಅಮಿತ್, ನಡ್ಡಾ ಬಂದ ಮೇಲೆ ಒಂದು ವರ್ಷ ಇರುವಾಗಲೇ ಪ್ರಚಾರ ಆರಂಭವಾಗಿದೆ. ಕಾಂಗ್ರೆಸ್ ಜೆಡಿಎಸ್ ಇನ್ನೂ ತಯಾರಿಲ್ಲ. ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್, ಇವರಲ್ಲಿ ಯಾರು ಎಂಬ ಗೊಂದಲ ಬಗೆಹರಿದಿಲ್ಲ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ:ಭಯೋತ್ಪಾದಕರು ಬಾಲ ಬಿಚ್ಚಿದರೆ ಬುಲ್ಡೋಜರ್ ಹರಿಸಲಾಗುತ್ತದೆ: ಸಿ.ಟಿ.ರವಿ

ಜೆಡಿಎಸ್ ಇನ್ನೂ ಹೆಜ್ಜೆ ಇಟ್ಟಿಲ್ಲ. ಅವರ ಪಕ್ಷದಿಂದ ಸಾಕಷ್ಟು ಜನ ಗಂಟು ಮೂಟೆ ಕಟ್ಟುತ್ತಿದ್ದಾರೆ. ಹೀಗಾಗಿ ನಾವು 150ಕ್ಕೂ ಹೆಚ್ಚು ಸ್ಥಾನ ಗೆಲ್ಲಬೇಕು. ನಾವು ಮೋದಿ ಬಂದಾಗ ಗೆದ್ದೆ ಗೆಲ್ಲುತ್ತೇವೆ ಎನ್ನುತ್ತೇವೆ. ಆದರೆ ಕಾಂಗ್ರೆಸ್ ನಲ್ಲಿ ಪ್ರಚಾರಕ್ಕೆ ಯಾರಿದ್ದಾರೆ? ಪಪ್ಪುನಾ? ಕಾಂಗ್ರೆಸ್ ನಲ್ಲಿ ಅಪ್ಪು… ಪಪ್ಪು ಅಷ್ಟೇ ಇರುವುದು. ಜೆಡಿಸ್ ನಲ್ಲಿ ಆರರ ಮೇಲೆ ಸೀಟು ಗೆಲ್ಲಲ್ಲ ಎಂದರು.

ಸಾಕಷ್ಟು ನಾಯಕರು ಬಿಜೆಪಿಗೆ ಬರಲು ರೆಡಿಯಾಗಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ನಿಂದ ಬರುತ್ತಾರೆ. ಹೈಕಮಾಂಡ್ ಅನುಮತಿ ಕೊಡಬೇಕು ಅಷ್ಟೇ ಎಂದರು.

Advertisement

ಕಾಂಗ್ರೆಸ್ ಗೆ ಹಿಜಾಬ್ ಹಾಗೂ ಹುಬ್ಬಳ್ಳಿ ವಿಚಾರ ಬಿಟ್ಟರೆ ಬೇರೆ ಏನು ಕಾಣುತ್ತಿಲ್ಲ. ಇದರಿಂದಾಗಿಯೇ ಕಾಂಗ್ರೆಸ್ ಧೂಳಿಪಟ ಆಗುತ್ತಿದೆ. ಈ ಚುನಾವಣೆ ಮುಗಿದ ಮೇಲೆ ಕಾಂಗ್ರೆಸ್ ನಲ್ಲಿ ಯಾರು ಇರಲ್ಲ. ಜನರಿಗೆ ಬೇಕಾಗಿದ್ದು ಅಭಿವೃದ್ಧಿ ಸರ್ಕಾರ. ನರೇಂದ್ರ ಮೋದಿ ಅಮೆರಿಕಾಗೆ ಹೋದರೆ ಅತೀ ಹೆಚ್ಚು ಜನ ಸೇರೋದು ಅಮೆರಿಕ ಅಧ್ಯಕ್ಷರಿಗಲ್ಲ, ಮೋದಿಯವರಿಗೆ. ಉಕ್ರೇನ್ ಹಾಗೂ ರಷ್ಯಾದಲ್ಲಿ ಯುದ್ಧ ನಡೆಯುತ್ತಿದೆ. ಎರಡೂ ದೇಶದ ನಾಯಕರು ಮೋದಿ ಫೋನ್ ಮಾತ್ರ ಸ್ವೀಕರಿಸುತ್ತಾರೆ. ಇದರಿಂದ ಭಾರತದ ಶಕ್ತಿ ಅರ್ಥವಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next