Advertisement

Kaup: ವ್ಯವಹಾರದಲ್ಲಿ ನಷ್ಟ; ನೇಣಿಗೆ ಶರಣು

01:14 AM Sep 15, 2023 | Team Udayavani |

ಕಾಪು: ವ್ಯವಹಾರದಲ್ಲಿ ನಷ್ಟ ಹೊಂದಿದ್ದ ಕಾಪು ಲೈಟ್‌ಹೌಸ್‌ ರಸ್ತೆ ಬೈರುಗುತ್ತು ತೋಟದ ನಿವಾಸಿ ಭಾಸ್ಕರ್‌ ಕರ್ಕೇರ (39) ಅವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೆ. 13ರಂದು ರಾತ್ರಿ ನಡೆದಿದೆ.

Advertisement

ಮೃತ ಭಾಸ್ಕರ್‌ ಕರ್ಕೇರ ಕಾಪು ಪೇಟೆಯಲ್ಲಿ ಚಪ್ಪಲಿ ಅಂಗಡಿ ವ್ಯಾಪಾರ ನಡೆಸುತ್ತಿದ್ದು, ವ್ಯಾಪಾರ ಸರಿಯಿಲ್ಲದೇ ಅಂಗಡಿ ಮುಚ್ಚಿದ್ದರು. ಎಂಟು ತಿಂಗಳಿನಿಂದ ಕೆಲಸವಿಲ್ಲದೇ ಮನೆಯಲ್ಲಿದ್ದರು. ಪ್ರಸ್ತುತ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದ ಅವರು ಜೀವನದಲ್ಲಿ ಜುಗುಪ್ಸೆಗೊಂಡು ಮನೆಯ ಮಲಗುವ ಕೋಣೆಯ ಫ್ಯಾನ್‌ಗೆ ಶಾಲ್‌ ಬಿಗಿದು ಆತ್ಯಹತ್ಯೆ ಮಾಡಿಕೊಂಡಿದ್ದಾರೆ.

ಸಹೋದರ ಜನಾರ್ದನ ಕರ್ಕೇರ ನೀಡಿರುವ ದೂರಿನಂತೆ ಕಾಪು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಅವಿವಾಹಿತಾಗಿದ್ದ ಅವರು ತಾಯಿ, ಸಹೋದರ, ಮೂವರು ಸಹೋದರಿಯನ್ನು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next