Advertisement

ಸೋತರೂ ನಿಮ್ಮೊಂದಿಗಿರುವೆ: ಯಾಳಗಿ

03:47 PM May 20, 2018 | |

ಶಹಾಪುರ: ಸ್ಪರ್ಧೆ ಎಂದ ಮೇಲೆ ಸೋಲು-ಗೆಲುವು ಸಾಮಾನ್ಯ. ಹೀಗಾಗಿ ನಾನು ಚುನಾವಣೆಯಲ್ಲಿ ಸೋತರೂ ಕಾರ್ಯಕರ್ತರಲ್ಲಿ ಯಾವುದೇ ಆತಂಕ ಬೇಡ. ಮಾತು ನೀಡಿದಂತೆ ನಿಮ್ಮೆಲ್ಲರ ಜೊತೆಗೆ ಬೆರೆಯುವೆ ಎಂದು ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಅಮೀನರಡ್ಡಿ ಪಾಟೀಲ ಯಾಳಗಿ ಹೇಳಿದರು.  ವಿಧಾನಸಭೆ ಚುನಾವಣೆಯಲ್ಲಿ ಶಹಾಪುರ ಮತಕ್ಷೇತ್ರದಿಂದ ಜೆಡಿಎಸ್‌ನಿಂದ ಸ್ಪರ್ಧಿಸಿ ಸೋಲು ಅನುಭವಿಸಿದ ಅವರು, ಶನಿವಾರ ತಾಲೂಕು ಜೆಡಿಎಸ್‌ ಘಟಕ ಕರೆದ ಆತ್ಮಾವಲೋಕನ ಸಭೆಯಲ್ಲಿ ಅವರು ಮಾತನಾಡಿದರು.

Advertisement

ಮೊದಲ ಬಾರಿಗೆ ಸ್ಪರ್ಧಿಸಿ ತಮ್ಮೆಲ್ಲರ ನೆರವಿನಿಂದ 23 ಸಾವಿರಕ್ಕೂ ಅಧಿಕ ಮತಗಳನ್ನು ಗಳಿಸುವಲ್ಲಿ ತಮ್ಮೆಲ್ಲರ ಶ್ರಮ ಇದೆ. ಚುನಾವಣೆಯಲ್ಲಿ ಕಳೆದ ಎರಡು ಮೂರು ತಿಂಗಳಿಂದ ನನ್ನ ಜೊತೆ ಓಡಾಡಿ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ ಅವರು, ಜೆಡಿಎಸ್‌ ಕಾರ್ಯಕರ್ತರು ಹಿರಿಯರು ಪಕ್ಷದ ಸರ್ವ ಮುಖಂಡರು ಹಿತೈಷಿಗಳು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.

ಅಲ್ಲದೆ ಮುಂದೆ ನಮ್ಮದೆ ಸರ್ಕಾರ ರಚನೆ ಆಗುತ್ತಿದ್ದು, ಕುಮಾರಣ್ಣ ಅವರು ಸಿಎಂ ಆಗಲಿದ್ದಾರೆ. ರಾಜ್ಯದಲ್ಲಿ ನಮ್ಮದೆ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಕಾಂಗ್ರೆಸ್‌ ಜೊತೆ ಕೈ ಜೋಡಿಸಿದರು, ಕುಮಾರಣ್ಣನವರ ಮೇಲೆ ಭರವಸೆ ಇದೆ. ನಾಡಿನ ಅಭಿವೃದ್ಧಿಗಾಗಿ ಅವರ ಸೇವೆ ಅಗತ್ಯ ಇದೆ ಎಂದರು. ಈ ಸಂದರ್ಭದಲ್ಲಿ ಬಸವರಾಜ ವಿಭೂತಿಹಳ್ಳಿ, ತಾಲೂಕು ಅಧ್ಯಕ್ಷ ವಿಠಲ್‌ ವಗ್ಗಿ ಮಾತನಾಡಿದರು. ಮುಖಂಡರಾದ ಸೈಯ್ಯದ್‌ ಜಾಫೀ, ಬಸವರಾಜ ಅರುಣಿ, ಪ್ರದೀಪ ಪುರೆಲ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next