Advertisement

ನೆಲಕ್ಕುರುಳಿದ ಲಾರಿ: ಸಂಚಾರ ಅಸ್ತವ್ಯಸ್ತ

03:18 PM Jun 12, 2018 | Team Udayavani |

ಬಳ್ಳಾರಿ: ನಗರದ ಎಚ್‌.ಆರ್‌.ಗವಿಯಪ್ಪ ವೃತ್ತದ ಬಳಿ ಸೋಮವಾರ ಸರಕು ಸಾಗಾಣೆ ಲಾರಿಯೊಂದು ಆಯತಪ್ಪಿ ನೆಲಕ್ಕೆ ಉರುಳಿಬಿದ್ದಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

Advertisement

ರೈಲ್ವೇ ಸೇತುವೆ ರಸ್ತೆಯಿಂದ ಗವಿಯಪ್ಪ ವೃತ್ತದ ಮಾರ್ಗವಾಗಿ ಹೊಸಬಸ್‌ ನಿಲ್ದಾಣದತ್ತ ತಿರುವಿನಲ್ಲಿ ಸಂಚರಿಸುತ್ತಿರುವಾಗ ನಿಯಂತ್ರಣ ತಪ್ಪಿದ ಲಾರಿಯು ವೃತ್ತದಲ್ಲೇ ನೆಲಕ್ಕುರುಳಿ ಬಿದ್ದಿದೆ. ಚಾಲಕ ಪ್ರಾಣಾಪಾಯದಿಂದ
ಪಾರಾಗಿದ್ದಾರೆ. ಮುಖ್ಯರಸ್ತೆ ನಡುವೆ ಲಾರಿ ಬಿದ್ದ ಪರಿಣಾಮ ಕೆಲಕಾಲ ಸಂಚಾರ ದಟ್ಟಣೆ ಹೆಚ್ಚಾಗಿದೆ. ವಿಷಯ ತಿಳಿದ ಸಂಚಾರ ನಿಯಂತ್ರಣ ಹಾಗೂ ಬ್ರೂಸ್‌ಪೇಟೆ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಕ್ರೇನ್‌ ಸಹಾಯದೊಂದಿಗೆ ಲಾರಿಯನ್ನು ಮೇಲೆತ್ತಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next