Advertisement

Raichur: ನುಗ್ಗಿ ಬಂದ ಲಾರಿ; ಬೈಕ್ ಸವಾರರಿಬ್ಬರ ದುರ್ಮರಣ

02:18 PM Oct 13, 2024 | Team Udayavani |

ರಾಯಚೂರು: ತಾಲೂಕಿನ ಚಿಕ್ಕಸೂಗುರು ಬಳಿಯ ಹೈದರಾಬಾದ್ ಮುಖ್ಯರಸ್ತೆಯಲ್ಲಿ ಲಾರಿಯೊಂದು ನುಗ್ಗಿ ಬಂದಿದ್ದು, ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Advertisement

ಶಿಲ್ಪ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆಂಧ್ರದ ಇರ್ಚೆಡ್ ಗ್ರಾಮದ ಜನಾರ್ದನ (35), ಲಿಂಗಸೂಗೂರಿನ ಚನ್ನಬಸವ ಪಾಟೀಲ್ (26) ಮೃತ ದುರ್ದೈವಿಗಳು. ಶಿವಬಸಪ್ಪ ಎನ್ನುವ ಯುವಕ ಬೈಕ್ ನಿಂದ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ನಿಯಂತ್ರಣ ತಪ್ಪಿದ ಲಾರಿ ರಸ್ತೆಯಲ್ಲಿ ಸಾಗುತ್ತಿದ್ದ ಬೈಕ್ ಮೇಲೆ ಹರಿದಿದೆ. ಒಂದು ಬೈಕ್ ಮಾತ್ರವಲ್ಲದೇ ಇನ್ನೂ ಎರಡು ಬೈಕ್ ಗಳ ಮೇಲೆಯೂ ಹರಿದಿದ್ದು ಬೈಕ್ ಸವಾರರು ಕೊಂಚದರಲ್ಲಿ ತಪ್ಪಿಸಿಕೊಂಡಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಗ್ರಾಮೀಣ ಪೊಲೀಸರು ಲಾರಿಯನ್ನು ವಶಪಡಿಸಿಕೊಂಡಿದ್ದು, ಚಾಲಕನನ್ನು ಬಂಧಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next