Advertisement

Belthangady: ಚರಂಡಿ ಸ್ಲ್ಯಾಬ್ ಮೇಲೆ ಸಂಚರಿಸಿದ ಲಾರಿ ಪಲ್ಟಿ

12:00 AM Oct 09, 2024 | Team Udayavani |

ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿ ಪುಂಜಾಲಕಟ್ಟೆ- ಚಾರ್ಮಾಡಿ ನಡುವೆ ಉಜಿರೆ ಪೇಟೆ ಬಳಿ ಸಿಮೆಂಟ್‌ ತುಂಬಿದ ಲಾರಿ ನೂತನ ಚರಂಡಿ ಸ್ಲ್ಯಾಬ್ ಮೇಲೆ ಸಂಚರಿಸಿದ ಪರಿಣಾಮ ಸ್ಲ್ಯಾಬ್ ತುಂಡಾಗಿ ಲಾರಿ ಸಿಲುಕಿಕೊಂಡ ಘಟನೆ ಅ. 8ರಂದು ನಡೆದಿದೆ.

Advertisement

ಹೆದ್ದಾರಿ ಕಾಮಗಾರಿ ಅರ್ಧದಲ್ಲೆ ನಿಂತಿದ್ದು, ರಸ್ತೆ ಇಕ್ಕೆಲದಲ್ಲಿ ನೀರು ಸಾಗಲು ನಿರ್ಮಿಸಿರುವ ಚರಂಡಿಗೆ ಹತ್ತಿದ್ದರಿಂದ ಚರಂಡಿ ಮೇಲ್ಭಾಗ ತುಂಡರಿಸಿ ಬಿದ್ದಿದೆ. ಲಾರಿ ಚಾಲಕ ಸಾಮರ್ಥ್ಯ ಗಮನಿಸದೆ ಚಲಾಯಿಸಿದ್ದರಿಂದ ಘಟನೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next