Advertisement

Raichur: ಸ್ಕೂಟಿ – ಕಾರು ಡಿಕ್ಕಿ; ಯುವತಿ ಸ್ಥಳದಲ್ಲೇ ಸಾವು

12:24 PM Oct 13, 2024 | Team Udayavani |

ರಾಯಚೂರು: ನಗರದ ಕೃಷಿ ವಿವಿ ಮುಂಭಾಗದಲ್ಲಿ ಕಾರು ಮತ್ತು ಸ್ಕೂಟಿ ನಡುವೆ ಡಿಕ್ಕಿ ಸಂಭವಿಸಿ ಯುವತಿ ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ (ಅ.12) ರಾತ್ರಿ ನಡೆದಿದೆ.

Advertisement

ನಗರದ ಉಪ ತಹಸೀಲ್ದಾರ್ ಬಸವರಾಜ ಅವರ ಪುತ್ರಿ ಸಾಕ್ಷಿ (22) ಮೃತಪಟ್ಟ ಯುವತಿ. ಸಂಬಂಧಿಕರಿಗೆ ಬನ್ನಿ ಕೊಟ್ಟು ಮರಳಿ ಮನೆಗೆ ಹೋಗುವ ಮಾರ್ಗದಲ್ಲಿ ರಸ್ತೆ ದಾಟುವಾಗ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ.

ತಲೆಗೆ ಬಲವಾಗಿ ಪೆಟ್ಟು ಬಿದ್ದ ಕಾರಣ ಸ್ಥಳದಲ್ಲೆ ಮೃತಪಟ್ಟಿದ್ದಾಳೆ. ಸ್ಕೂಟಿ ನಡೆಸುತ್ತಿದ್ದ ಸಂಜನಾಳಿಗೆ ಕಾಲು ಮುರಿದಿದ್ದು, ಹಿಂಬದಿ ಕುಳಿತ ಯುವತಿ ಮೃತಪಟ್ಟಿದ್ದಾಳೆ. ಕಾರು ಚಾಲಕ ಪರಾರಿಯಾಗಿದ್ದಾನೆ.

ನಗರದ ಟ್ರಾಫಿಕ್ ಠಾಣೆ ಪೊಲೀಸರು ವಾಹನಗಳನ್ನು ವಶಪಡಿಸಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next