Advertisement

ಹನುಮಂತ ದಲಿತ,ಭಾರತವನ್ನು ಒಂದುಗೂಡಿಸಿದ್ದ: ಯೋಗಿ ಆದಿತ್ಯನಾಥ್‌ 

04:14 PM Nov 29, 2018 | |

ಅಲ್ವಾರ್‌(ರಾಜಸ್ಥಾನ): ಹಿಂದು ದೇವರಾದ ಹನುಮಂತ ದಲಿತನಾಗಿದ್ದ , ಇಡೀ ಭಾರತವನ್ನು ಒಗ್ಗೂಡಿಸಿದ್ದ,ನಮ್ಮ ಯೋಚನೆಗಳು ಹನುಮಂತನಂತೆ ಆಗಬೇಕು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿಕೆ ನೀಡಿದ್ದಾರೆ. 

Advertisement

ಬಿಜೆಪಿ ಅಭ್ಯರ್ಥಿ ಪರ ಗುರುವಾರ ಚುನಾವಣಾ ಪ್ರಚಾರ ಸಭೆಯಲ್ಲಿ  ಮತದಾರರನ್ನುದ್ದೇಶಿಸಿ ಮಾತನಾಡಿದ ಯೋಗಿ  ನಾವೆಲ್ಲರೂ ಹನುಮಂತನಂತೆ ನಿರ್ಧಾರಗಳನ್ನು ಮಾಡಬೇಕು. ಸ್ವಯಂ ಆದಿವಾಸಿ,ದಲಿತ , ಶೋಷಿತನಾದರೂ ಇಡೀ ಭಾರತವನ್ನು ಒಗ್ಗೂಡಿಸಿದ್ದ. ಉತ್ತರದಿಂದ ದಕ್ಷಿಣಕ್ಕೆ, ಪೂರ್ವದಿಂದ ಪಶ್ಚಿಮಕ್ಕೆ ಭಾರತವನ್ನು ಒಂದು ಮಾಡಿದ್ದ ಎಂದರು. 

ಇದೇ ವೇಳೆ ನಾವು ರಾಮನ ಕೆಲಸ ಪೂರ್ಣಗೊಳಿಸುವ ವರೆಗೆ ವಿರಮಿಸಬಾರದು ಎಂದರು. 

ಈ ಹಿಂದೆ ಯೋಗಿ ಅವರು ಮಧ್ಯಪ್ರದೇಶದಲ್ಲಿ ಈ ಚುನಾವಣೆ ಬಜರಂಗ ಬಲಿ ಮತ್ತು ಕಾಂಗ್ರೆಸ್‌ನ ಅಲಿ ನಡುವಿನ ಹೋರಾಟ ಎನ್ನುವ ಮೂಲಕ ವಿವಾದಕ್ಕೆ ಗುರಿಯಾಗಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next