Advertisement

ಕೊಪ್ಪಳ ಕೂಲಿ ಕಾರ್ಮಿಕರಿಗೆ ಊಟ-ತಿಂಡಿ ಕೊಟ್ಟ ಬಂಟ್ವಾಳ ಗ್ರಾಮಾಂತರ ಠಾಣೆಯ ಪಿಎಸ್ಐ.!

09:35 AM Mar 29, 2020 | sudhir |

ಬಂಟ್ವಾಳ: ಒಂದೆಡೆ ಮಾಡುವುದಕ್ಕೆ ಕೆಲಸವಿಲ್ಲ, ಕೂತು ತಿನ್ನೋಣ ಎಂದರೆ ಕೈಯಲ್ಲಿ ದುಡ್ಡಿಲ್ಲ, ಊರಿಗೆ ಹೋಗೋಣವೆಂದರೆ ಸಾರಿಗೆ ವ್ಯವಸ್ಥೆ ಇಲ್ಲ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿದ್ದಾರೆ ಪರವೂರಿನ ಕೂಲಿ ಕಾರ್ಮಿಕರು.

Advertisement

ಇದೇ ಕಾರಣಕ್ಕೆ ಕೊಪ್ಪಳ ಮೂಲದ 12 ಮಂದಿಯ ಕುಟುಂಬವೊಂದು ನಡೆದುಕೊಂಡೇ ಊರಿಗೆ ಹೋಗಲು ಮುಂದಾಗಿದ್ದಾರೆ. ಈ ಕುಟುಂಬ ಊಟ ತಿಂಡಿಯಿಲ್ಲದೆ ನಡೆದುಕೊಂಡು ಹೋಗುವುದನ್ನು ಕಂಡ ರೌಂಡ್ಸ್ ನಲ್ಲಿದ್ದ ಬಂಟ್ವಾಳ ಗ್ರಾಮಾಂತರ ಪಿಎಸ್ಐ ಪ್ರಸನ್ನ ಅವರು ಕಾರ್ಮಿಕರನ್ನು ಬ್ರಹ್ಮರಕೂಟ್ಲು ಟೋಲ್ ಬಳಿ ಕೂರಿಸಿ, ಬಿಸ್ಕೇಟ್ – ನೀರು ಕೊಟ್ಟು ಸಂತೈಸಿದ್ದಾರೆ.

ಬಳಿಕ ಕುಟುಂಬ ಫರಂಗಿಪೇಟೆ ತಲುಪುತ್ತಿದ್ದಂತೆ ಅವರಿಗೆ ಊಟದ ವ್ಯವಸ್ಥೆಯನ್ನೂ ಮಾಡಿ ಕಳುಹಿಸಿದ್ದಾರೆ. ಪೊಲೀಸ್ ಇಲಾಖೆಯ ಎಎಸ್ಐ ರಮೇಶ್, ಸಿಬಂದಿ ನಝೀರ್, ಸೋಮಶೇಖರ್ ಜತೆಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next