Advertisement

ಲೋಕಾಪುರ:ಸೊಸೈಟಿಗಳಿಂದ ಹಳ್ಳಿಗಳಿಗೆ ಅನುಕೂಲ- ಗದ್ದಿಗೌಡರ

06:39 PM Jun 13, 2023 | Team Udayavani |

ಲೋಕಾಪುರ: ಕೋ ಆಪರೇಟಿವ್‌ ಸೊಸೈಟಿ ಸಮಾಜಕ್ಕೆ ಸಾಮಾಜಿಕ ಹಾಗೂ ಆರ್ಥಿಕವಾಗಿ ನೀಡುವ ಕೊಡುಗೆ ಅಪಾರವಿದೆ ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.

Advertisement

ಪಟ್ಟಣದಲ್ಲಿ ದಿ| ಜಮಖಂಡಿ ಅರ್ಬನ್‌ ಕೋ ಆಪ್‌ ಬ್ಯಾಂಕ್‌ ಲಿ. ಲೋಕಾಪುರ ಶಾಖೆ ಉದ್ಘಾಟಿಸಿ ಮಾತನಾಡಿ, ಭಾರತದಲ್ಲಿ ಬ್ಯಾಂಕ್‌ಗಳು ಮತ್ತು ಇತರೆ ಹಣಕಾಸು ಸಂಸ್ಥೆಗಳು ತಮ್ಮ ಸೇವೆಯನ್ನು ಗ್ರಾಮೀಣ ಪ್ರದೇಶಗಳಲ್ಲಿ ಒದಗಿಸಲು ವಿಫಲವಾಗಿದ್ದಾಗ ಇಂತಹ ಸೊಸೈಟಿಗಳು ವರದಾನದಂತೆ ಕಾರ್ಯನಿರ್ವಹಿಸಿವೆ ಎಂದರು.

ಸಂಸ್ಥೆಯ ಅಧ್ಯಕ್ಷ ಅಪ್ಪಾಸಾಹೇಬ ಮನಗೂಳಿ ಮಾತನಾಡಿ, ನಮ್ಮ ಬ್ಯಾಂಕ್‌ ಉಳಿತಾಯ ಖಾತೆ, ಚಾಲ್ತಿ ಖಾತೆ, ಆವರ್ತಕ ಖಾತೆ, ಧನಲಕ್ಷ್ಮೀ ಉಳಿತಾಯ ಖಾತೆ, ಮುದ್ಧತ ಠೇವು ಖಾತೆ, ಪಿಗ್ಮಿ ಖಾತೆ ಇಂತಹ ಹಲವು ಯೋಜನೆ ಹಮ್ಮಿಕೊಂಡು ಯಶಸ್ವಿ ಕಾರ್ಯನಿರ್ವಹಿಸುತ್ತಿದೆ. ಸ್ಥಳೀಯರ ಸಹಕಾರ ಅವಶ್ಯವಾಗಿದ್ದು ಗ್ರಾಹಕರ ಮತ್ತು ಸಿಬ್ಬಂದಿ ಆಡಳಿತ ಮಂಡಳಿಯವರ ಸಂಪೂರ್ಣ ಸಹಕಾರಿಂದ ಬ್ಯಾಂಕ್‌ ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು.

ಜ್ಞಾನೇಶ್ವರ ಮಠದ ಪೀಠಾಧಿಕಾರಿ ಬ್ರಹ್ಮಾನಂದ ಶ್ರೀ ಮಾತನಾಡಿ, ಪ್ರತಿ ವರ್ಷವೂ ಬ್ಯಾಂಕ್‌ ಉತ್ತುಂಗಕ್ಕೇರಲಿ. ಎಲ್ಲರ ಸಹಕಾರದಿಂದ ಬ್ಯಾಂಕ್‌ ಹೆಚ್ಚಿಗೆ ಲಾಭವಾಗಲಿ ಎಂದರು.

ಸಂಸ್ಥೆಯ ಉಪಾಧ್ಯಕ್ಷ ಮಾಮುನರಶೀದ ಪಾರ್ಥನಳ್ಳಿ, ಗುರುಲಿಂಗಪ್ಪ ನ್ಯಾಮಗೌಡ, ಫಕೀರಸಾಬ ಬಾಗವಾನ್‌, ನಂದರಾಯಪ್ಪ
ದಡ್ಡಿಮನಿ, ವಿರೂಪಾಕ್ಷಯ್ಯ ಕಂಬಿ, ಈರಣ್ಣ ಬಂಡಿಗಣಿ, ಧರೆಪ್ಪ ತೇಲಿ, ಪ್ರದೀಪ ಮಹಾಲಿಂಗಪುರ, ಬಸವರಾಜ ಕಲೂತಿ,
ಶಿವಕುಮಾರ ಕುಳ್ಳೊಳ್ಳಿ, ಅವಿನಾಶ ಆನಿಖೀಂಡಿ, ರಮೇಶ ಕನಕೇರಿ, ಅಪ್ಪಾಸಾಹೇಬ ಶಿಂಧೆ, ಈಶ್ವರ ಚೌಧರಿ, ಸಲಹಾ ಸಮಿತಿ ಸದಸ್ಯರಾದ ಶಿವಾನಂದ ಎಲ್‌. ಉದಡಿ, ಲೋಕಣ್ಣ ಭೀ. ಕತ್ತಿ, ಡಾ. ಬಸವರಾಜ ಹಿರೇಮಠ, ರಫೀಕ ಬೈರಕದಾರ,
ಅರ್ಜುನ ಕಾಂಬಳೆ, ಶಾಖಾ ವ್ಯವಸ್ಥಾಪಕ ರಮೇಶ ಮರನೂರ ಹಾಗೂ ನಿರ್ದೇಶಕ ಮಂಡಳಿ, ನಿರ್ವಹಣಾ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next