Advertisement

ದೇಶದ ಮತದಾರ ಜಾಣ; ವಿಶೇಷ ಸಂದರ್ಶನದಲ್ಲಿ ಪ್ರಧಾನಿ ಮೋದಿ ಹೇಳಿದ್ದೇನು?

10:00 AM Mar 30, 2019 | Nagendra Trasi |

ನವದೆಹಲಿ:2019ರ ಲೋಕಸಭಾ ಚುನಾವಣೆಯಲ್ಲಿ 300 ಸ್ಥಾನಗಳನ್ನು ಗಳಿಸುವ ಮೂಲಕ ಎನ್ ಡಿಎ ಕೇಂದ್ರದಲ್ಲಿ ಸರ್ಕಾರ ರಚಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ವಿಶ್ವಾಸವ್ಯಕ್ತಪಡಿಸಿದ್ದಾರೆ.

Advertisement

ನನ್ನ ರಾಜಕೀಯದ ಅನುಭವದ ಪ್ರಕಾರ ಕಳೆದ ದಿನಗಳಿಗಿಂತ ನಮ್ಮ ಸ್ಥಾನಗಳಿಕೆಯಲ್ಲಿ ಹೆಚ್ಚಳವಾಗಲಿದೆ. ಯಾಕೆಂದರೆ ಜನರಿಗೆ ಮೋದಿ ಬಗ್ಗೆ ಕೆಲವು ಸಂದೇಹಗಳಿದ್ದವು. ಆದರೆ ಇದೀಗ ದೇಶದ ಜನರಿಗೆ ಮೋದಿ ದೇಶದ ಭದ್ರತೆ, ಬಡವರು ಹಾಗೂ ಇತರ ವಿಚಾರಗಳಲ್ಲಿ ಏನು ಮಾಡಿದ್ದಾರೆ ಎಂಬುದನ್ನು ಮನಗಂಡಿದ್ದಾರೆ ಎಂದು ರಿಪಬ್ಲಿಕ್ ಭಾರತ್ ನ್ಯೂಸ್ ಚಾನೆಲ್ ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.

ನನ್ನ ಕಾರ್ಯವೈಖರಿ ಮತ್ತು ದೃಷ್ಟಿಕೋನದ ಬಗ್ಗೆಯೂ ಜನರಿಗೆ ಅರ್ಥವಾಗಿದೆ. ಈ ನಿಟ್ಟಿನಲ್ಲಿ 2014ರ ಲೋಕಸಭಾ ಚುನಾವಣೆಗಿಂತ ಈ ಬಾರಿ ಬಿಜೆಪಿ ಪೂರ್ಣ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಲಿದೆ ಎಂದರು.

ಕಾಂಗ್ರೆಸ್ ವಿರುದ್ಧ ಕಟುವಾಗಿ ಟೀಕಾಪ್ರಹಾರ ನಡೆಸಿದ ಮೋದಿ, ಹಿಂದಿನ ಸರ್ಕಾರ ರಕ್ಷಣಾ ವ್ಯವಹಾರದಲ್ಲಿಯೂ ಭ್ರಷ್ಟಾಚಾರ ಎಸಗುತ್ತಿತ್ತು ಎಂದು ಆರೋಪಿಸಿದರು. ನಮ್ಮ ದೇಶದಲ್ಲಿ ಹಿಂದಿನ ಸರ್ಕಾರಕ್ಕೆ ರಕ್ಷಣಾ ಒಪ್ಪಂದಗಳೆಂದರೆ ಎಟಿಎಂ ಇದ್ದ ಹಾಗೆ ಇತ್ತು. ಹಿಂದಿನ ಎಲ್ಲಾ ಕಾಂಗ್ರೆಸ್ ಸರ್ಕಾರ ಈ ಎಟಿಎಂ ಅನ್ನು ಉಪಯೋಗಿಸಿಕೊಂಡಿದೆ ಎಂದು ದೂರಿದರು.

ಮಹಾಘಟಬಂಧನ್ ಹೆದರಿ ಹೋಗಿವೆ!

Advertisement

2014ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿ ಮಹಾಘಟಬಂಧನ್ ಹೆಚ್ಚು ಭಯಕ್ಕೊಳಗಾಗಿವೆ. ದೇಶದ ಜನರ ಮನೋಭಾವ ಕೂಡಾ ಬದಲಾಗಿದೆ. ದೇಶದಲ್ಲಿ ಪೂರ್ಣ ಪ್ರಮಾಣದ ಬಹುಮತ ಇರುವ ಸರ್ಕಾರವನ್ನೇ ಜನರು ಬಯಸುತ್ತಾರೆ. ಕಳೆದ 30 ವರ್ಷಗಳಲ್ಲಿ ಅಸ್ಥಿರತೆಯ ಸರ್ಕಾರಗಳನ್ನು ನೋಡಿದ್ದಾರೆ. ಜೊತೆಗೆ ಐದು ವರ್ಷಗಳ ಪೂರ್ಣ ಬಹುಮತ ಇರುವ ಸರ್ಕಾರವನ್ನು ನೋಡಿದ್ದಾರೆ. ಹೀಗಾಗಿ ದೇಶದ ಜನರಿಗೆ ಮತ್ತೆ ಅಸ್ಥಿರ ಸರ್ಕಾರ ರಚನೆ ಬೇಕಾಗಿಲ್ಲ ಎಂದು ಸಂದರ್ಶನದಲ್ಲಿ ಕೇಳಿದ ಪ್ರಶ್ನೆಗೆ ವಿವರಿಸಿದ್ದಾರೆ.

ವಂಶಾಡಳಿತ ಪ್ರಜಾಪ್ರಭುತ್ವಕ್ಕೆ ಮಾರಕ:

ದೇಶದ ರಾಜಕಾರಣದಲ್ಲಿ ಒಂದೇ ಕುಟುಂಬದ ನಾಲ್ಕು ತಲೆಮಾರುಗಳು ಬಡತನ ನಿರ್ಮೂಲನೆ ಬಗ್ಗೆಯೇ ಮಾತನಾಡಿವೆ. ಇಂದಿರಾ ಗಾಂಧಿ ಕೂಡಾ ಗರಿಬೀ ಹಠಾವೋ ಎಂದರು, ರಾಜೀವ್ ಗಾಂಧಿ, ಈಗ ರಾಹುಲ್ ಗಾಂಧಿ ಬಡತನ ನಿರ್ಮೂಲನೆ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next