Advertisement
ಬಿಜೆಪಿ, ಶಿವಸೇನೆ ಭಿನ್ನ ಹೇಳಿಕೆ: ಲೋಕಸಭೆ, ವಿಧಾನಸಭೆ ಚುನಾವಣೆಗೆ ಮೈತ್ರಿ ಘೋಷಿಸಿಕೊಂಡಿರುವ ಬಿಜೆಪಿ- ಶಿವಸೇನೆ, ಮುಖ್ಯಮಂತ್ರಿ ಸ್ಥಾನದ ಬಗ್ಗೆ ಭಿನ್ನ ಹೇಳಿಕೆ ನೀಡಿವೆ. ಬಿಜೆಪಿ ನಾಯಕ, ಸಚಿವ ಚಂದ್ರಕಾಂತ್ ಪಾಟೀಲ್ ಹೆಚ್ಚು ಸ್ಥಾನ ಗೆದ್ದ ಪಕ್ಷಕ್ಕೆ ಮುಖ್ಯಮಂತ್ರಿ ಸ್ಥಾನ ಸಿಗಬೇಕು ಎಂದಿದ್ದಾರೆ. ಅದನ್ನು ತಿರಸ್ಕರಿಸಿರುವ ಶಿವಸೇನೆ ನಾಯಕ, ಸಚಿವ ರಾಮದಾಸ ಕದಂ, ಮುಖ್ಯಮಂತ್ರಿ ಸ್ಥಾನವನ್ನು ಹಂಚಿಕೆ ಮಾಡುವ ಬಗ್ಗೆ ಒಪ್ಪಂದವಾದ ಬಳಿಕವೇ ಬಿಜೆಪಿ ಜತೆಗೆ ಪಕ್ಷ ಸ್ಥಾನ ಹೊಂದಾಣಿಕೆ ಬಗ್ಗೆ ಅಂತಿಮಪಡಿಸಲು ಒಪ್ಪಿಕೊಂಡಿದೆ ಎಂದಿದ್ದಾರೆ. ಇದೇವೇಳೆ ಶಿವಸೇನೆ, ನಮ್ಮ ಮೈತ್ರಿಯನ್ನು ವಿರೋಧಿಸುವವರನ್ನು ಹುಳಗಳು. ಅವುಗಳನ್ನು ಹೊಸಕಿ ಹಾಕಲಾಗುತ್ತದೆ. ರಾಹುಲ್, ಪ್ರಿಯಾಂಕಾ ವಾದ್ರಾ ಪ್ರಧಾನಿ ನರೇಂದ್ರ ಮೋದಿ ಎದುರು ಪ್ರಬಲ ನಾಯಕರೇ ಅಲ್ಲ ಎಂದಿದೆ.
ಪ್ರಧಾನಿ ಮೋದಿ ಸರಕಾರದಡಿ ಜಾರಿಗೊಂಡ ವಿವಿಧ ಯೋಜನೆಗಳ ಫಲಾನುಭವಿಗಳನ್ನು ಭೇಟಿ ಮಾಡುವ ದೇಶವ್ಯಾಪಿ ಅಭಿಯಾನಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಗುರುವಾರ ಚಾಲನೆ ನೀಡಲಿದ್ದಾರೆ. ಆಂಧ್ರಪ್ರದೇ ಶದಲ್ಲಿ ಈ ಅಭಿಯಾನ ಉದ್ಘಾಟನೆಗೊಳ್ಳಲಿದ್ದು, ಆನಂತರ ವಿವಿಧ ರಾಜ್ಯಗಳಿಗೂ ಇದು ಪಸರಿಸಲಿದೆ. ದೇಶಾದ್ಯಂತ, ಕೇಂದ್ರದ ವಿವಿಧ ಯೋಜನೆಗಳ ಫಲಾನುಭವಿಗಳ ಸಂಖ್ಯೆ ಒಟ್ಟು 22 ಕೋಟಿಯಷ್ಟಿದ್ದು, ಇವರೆಲ್ಲರನ್ನೂ ಭೇಟಿ ಮಾಡಿ ಯೋಜನೆಯ ಲಾಭಗಳನ್ನು ಮನದಟ್ಟು ಮಾಡುವ ಮೂಲಕ ಬಿಜೆಪಿಯ ಬಗ್ಗೆ ಉತ್ತಮ ಅಭಿಪ್ರಾಯ ಸೃಷ್ಟಿಸುವುದು ಈ ಯೋಜನೆಯ ಗುರಿಯಾಗಿದೆ.