Advertisement

ಲೋಕಸಭೆ ಚುನಾವಣೆ: ವಾಹನಗಳ ತಪಾಸಣೆ

01:00 AM Mar 20, 2019 | Team Udayavani |

ಸೋಮವಾರಪೇಟೆ:ಲೋಕ ಸಭೆ ಚುನಾವಣೆ ಘೋಷಣೆಯಾಗಿರುವುದರಿಂದ, ಹೊರ ಜಿಲ್ಲೆಯಿಂದ ಜಿಲ್ಲೆಗೆ ಪ್ರವೇಶ ಪಡೆಯುವ ವಾಹನಗಳ ತಪಾಸಣೆ ಇದೀಗ ಬಿರುಸುಗೊಂಡಿದೆ.

Advertisement

ಜಿಲ್ಲಾ ಗಡಿ ಭಾಗಗಳಲ್ಲಿ ಚೆಕ್‌ ಪೋಸ್ಟ್‌ಗಳನ್ನು ನಿರ್ಮಿಸಿ, ಹೊರ ಜಿಲ್ಲೆಯಿಂದ ಬರುವ ಎಲ್ಲ ವಾಹನಗಳ ತಪಾಸಣೆ ಮಾಡಲಾಗುತ್ತಿದೆ. ದಿನದ 24 ಗಂಟೆಗಳು ಕಾರ್ಯ ನಿರ್ವಹಿಸುತ್ತಿರುವ ಕೇಂದ್ರಗಳಲ್ಲಿ, 6 ಮಂದಿ ಎಕ್ಸಿಕ್ಯೂಟಿವ್‌ ಮ್ಯಾಜಿಸ್ಟ್ರೇಟರ್‌ ಹಾಗೂ ಸಹಾಯಕರು 8 ಗಂಟೆಗಳಂತೆ ಮೂರು ಪಾಳಿಗಳಲ್ಲಿ, 4 ಪೊಲೀಸರು 12 ಗಂಟೆಗಳಂತೆ ಎರಡು ಪಾಳಿಗಳಲ್ಲಿ ಹಾಗೂ ಇಬ್ಬರು ಹೋಮ್‌ಗಾರ್ಡ್‌ ಕಾರ್ಯನಿರ್ವಹಿಸುತ್ತಿದ್ದಾರೆ. 

ಹಾಸನ ಜಿಲ್ಲೆಯಿಂದ ಸೋಮವಾರಪೇಟೆ ತಾಲೂಕಿಗೆ ಪ್ರವೇಶಿಸುವ ಬಾಣಾವಾರ ಗೇಟ್‌ನಲ್ಲಿ ತಪಾಸಣ ಕೇಂದ್ರದಲ್ಲಿ ವಾಹನಗಳನ್ನು ತಪಾಸಣೆ ಸೋಮವಾರ ಮಾಡಲಾಯಿತು. ಈ ಸಂದರ್ಭ ಎಕ್ಸಿಕ್ಯೂಟಿವ್‌ ಮ್ಯಾಜಿಸ್ಟ್ರೇಟರ್‌ ರಮಣ ಗೌಡ, ಸಹಾಯಕ ಮ್ಯಾಜಿಸ್ಟ್ರೇಟರ್‌ ಪೀಟರ್‌, ಪೊಲೀಸ್‌ ಮುಖ್ಯ ಪೇದೆ ಶಶಿಧರ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next