Advertisement

ಲಾಕ್‌ಡೌನ್‌: ಸರಕಾರದ ನೆರವಿನತ್ತ ಕೈಗಾರಿಕೆಗಳ ನಿರೀಕ್ಷೆ

11:49 PM May 07, 2021 | Team Udayavani |

ಬೆಂಗಳೂರು: ಕೈಗಾರಿಕೆಗಳ ಮೇಲೆ ನಿರ್ಬಂಧ ವಿಧಿಸಿರುವುದು ರಾಜ್ಯದ ಕೈಗಾರಿಕೋದ್ಯಮಿಗಳ ಆತಂಕಕ್ಕೆ ಕಾರಣವಾಗಿದೆ.

Advertisement

ರಾಜ್ಯದಲ್ಲಿ ಅಂದಾಜು 6.50 ಲಕ್ಷ ಮಧ್ಯಮ, ಸಣ್ಣ ಮತ್ತು ಅತಿಸಣ್ಣ ಕೈಗಾರಿಕೆಗಳಿದ್ದು, 2.80 ಕೋಟಿ ಕಾರ್ಮಿಕರಿದ್ದಾರೆ. ಈಗ ಆ ಉದ್ಯಮ ಹಾಗೂ ಕಾರ್ಮಿಕರೆಲ್ಲರೂ ಅತಂತ್ರರಾಗಲಿದ್ದಾರೆ. ಅಲ್ಲದೆ, ರಾಜ್ಯದ ಆರ್ಥಿಕ ವೃದ್ಧಿಯಲ್ಲಿ ಈ ಕ್ಷೇತ್ರ ಶೇ. 40ರಷ್ಟು ಕೊಡುಗೆ ನೀಡುತ್ತಿದೆ. ಇದರಲ್ಲೂ ಖೋತಾ ಆಗಲಿದೆ ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಕೆ.ಬಿ. ಅರಸಪ್ಪ ಆತಂಕ ವ್ಯಕ್ತಪಡಿಸುತ್ತಾರೆ.

ಸಾರ್ವಜನಿಕರ ಆರೋಗ್ಯ ಮುಖ್ಯ ಇರ ಬಹುದು. ಅದರೊಂದಿಗೆ ಕೋಟ್ಯಂತರ ಕಾರ್ಮಿ ಕರು ಅವಲಂಬಿತರಾಗಿರುವ ಉದ್ಯಮಗಳು ಕೂಡ ಅಷ್ಟೇ ಮುಖ್ಯ. ಸರಕಾರ ಮೊದಲೇ ಈ ಮಹಾಮಾರಿಯ ನಿಯಂತ್ರಣಕ್ಕೆ ಮುಂದಾಗಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ.  ಈಗ ಕೈಗಾರಿಕೆಗಳ ನೆರವಿಗಾದರೂ ಸರಕಾರಗಳು ಮುಂದಾಗಬೇಕು. ಈ ನಿಟ್ಟಿನಲ್ಲಿ ಸಾಲದ ಕಂತುಗಳ ಪಾವತಿಗೆ ಇರುವ ಅವಧಿಯನ್ನು ಆರು ತಿಂಗಳು ವಿಸ್ತರಿಸಬೇಕು. ಇಎಸ್‌ಐ, ಭವಿಷ್ಯನಿಧಿಯನ್ನು ಕೇಂದ್ರ ಸರಕಾರ ಪಾವತಿಸಬೇಕು. ಕೈಗಾರಿಕೆಗಳಿಗೆ ಇರುವ ವಿದ್ಯುತ್‌ ಸ್ಥಿರ ಶುಲ್ಕವನ್ನು ಆರು ತಿಂಗಳ ಮಟ್ಟಿಗೆ ಮನ್ನಾ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ನೆರವು ಅನಿವಾರ್ಯ :

ಈ ಬಗ್ಗೆ ಪ್ರತಿಕ್ರಿಯಿಸಿರುವ ಪೀಣ್ಯ ಕೈಗಾರಿಕೆ ಗಳ ಸಂಘದ ಅಧ್ಯಕ್ಷ ಸಿ. ಪ್ರಕಾಶ್‌, ಕಳೆದ ಹಣಕಾಸು ವರ್ಷಾಂತ್ಯದ ಅಂಕಿ-ಅಂಶಗಳನ್ನೇ ತೆಗೆದು ಕೊಂಡರೂ ಬ್ಯಾಂಕ್‌ಗಳಲ್ಲಿ ಸಣ್ಣ ಮತ್ತು ಅತಿಸಣ್ಣ ಕೈಗಾರಿಕಾ ಕ್ಷೇತ್ರದ ಅನುತ್ಪಾದಕ ಆಸ್ತಿ (ಎನ್‌ಪಿಎ) ಶೇ. 30-35ರಷ್ಟಿದೆ. ಇಂತಹ ಸಂದರ್ಭದಲ್ಲಿ ಲಾಕ್‌ಡೌನ್‌ ಆಗುತ್ತಿದೆ. ಕೆಲವು  ವಿನಾಯಿತಿ ನೀಡಿದ್ದರೂ, ಸಂಪೂರ್ಣ ಕಾರ್ಯಾಚರಣೆ ಕಷ್ಟ ಎನ್ನುತ್ತಾರೆ.

Advertisement

ಕಳೆದ ಬಾರಿ ಆತ್ಮನಿರ್ಭರ ಭಾರತದಡಿ ಶೇ. 20ರಷ್ಟು ಸಾಲ ಸೌಲಭ್ಯ ಕಲ್ಪಿಸಲಾಯಿತು. ಆದರೆ, ಅದಕ್ಕೆ ಎರಡು ತಿಂಗಳು ಸಾಲದ ಕಂತು (ಇಎಂಐ) ಬಾಕಿ ಇಟ್ಟುಕೊಂಡವರಿಗೆ ಮಾತ್ರ ಎಂಬ ನಿಯಮ ವಿಧಿಸಲಾಯಿತು. ಹಾಗಾಗಿ, ಬಹುತೇಕರಿಗೆ ಅದರ ಲಾಭ ಸಿಗಲಿಲ್ಲ. ಈ ಸಲ ಅದು ಪುನರಾವರ್ತನೆ ಆಗದಿರಲಿ ಎಂದು ಸಣ್ಣ ಮತ್ತು ಅತಿ ಸಣ್ಣ ಉದ್ಯಮಿಗಳು ಆಗ್ರಹಿಸುತ್ತಾರೆ.

ಸರಕಾರದಿಂದ ನಿರೀಕ್ಷೆ :

  • ಲಾಕ್‌ಡೌನ್‌ ಅವಧಿಯಲ್ಲಿ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಬೇಕು.
  • ಇಎಂಐ ಅನ್ನು ಆರು ತಿಂಗಳ ಕಾಲ ವಿಸ್ತರಿಸಬೇಕು.
  • ಕಚ್ಚಾವಸ್ತುಗಳ ಬೆಲೆಗೆ ಕಡಿವಾಣ ಅಗತ್ಯ.
  • ಜಿಎಸ್‌ಟಿ ಪಾವತಿಗೆ 3 ತಿಂಗಳು ಅವಕಾಶ.
  • ಆರ್ಥಿಕ ನೆರವು ಕಲ್ಪಿಸಬೇಕು.

ಪರಿಣಾಮ ಏನು? :

  • ಕಳೆದ ಲಾಕ್‌ಡೌನ್‌ನಿಂದ ಶೇ. 10ರಷ್ಟು ಕೈಗಾರಿಕೆಗಳು ಸ್ಥಗಿತಗೊಂಡಿದ್ದು, ಈಗ ಇದರ ಪ್ರಮಾಣ ಹೆಚ್ಚಲಿದೆ.
  • 80 ಕಾರ್ಮಿಕರು ದುಡಿಯು ತ್ತಿದ್ದು, ಅವರಿಗೆ ವೇತನ ಪಾವತಿ ಸವಾಲಾಗಲಿದ್ದು, ಅವರ ಜೀವನವೂ ಕಷ್ಟವಾಗಲಿದೆ.
  • ಈಗಾಗಲೇ ಶೇ. 30-35ರಷ್ಟು ಎನ್‌ಪಿಎ ಇದೆ. ಇದರ ಪ್ರಮಾಣ ಹೆಚ್ಚಲಿದೆ.
  • ಮತ್ತಷ್ಟು ಕಾರ್ಮಿಕರು ಬಿಟ್ಟುಹೋಗಲಿದ್ದು, ಉದ್ಯಮಗಳ ಮೇಲೆ ಒತ್ತಡ ಬೀಳಲಿದೆ.
Advertisement

Udayavani is now on Telegram. Click here to join our channel and stay updated with the latest news.

Next