Advertisement

ಅಪಾಯ ಕೇಂದ್ರಗಳಲ್ಲಿ ಲಾಕ್‌ಡೌನ್‌ ವಿಸ್ತರಣೆ

10:05 AM Apr 09, 2020 | Sriram |

ಬೆಂಗಳೂರು: ಕೋವಿಡ್‌-19 ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಇನ್ನೂ ಆರು ತಿಂಗಳು ನಿಗಾ ಸಹಿತ ಎಚ್ಚರಿಕೆ ವಹಿಸಲು ಸರಕಾರಕ್ಕೆ ಸಲಹೆ ನೀಡಿರುವ ತಜ್ಞರು, ಹಾಟ್‌ಸ್ಪಾಟ್‌ಗಳಲ್ಲಿ ಲಾಕ್‌ ಡೌನ್‌ ಮುಂದುವರಿಸುವಂತೆ ತಿಳಿಸಿದ್ದಾರೆ.

Advertisement

ಈ ಬಗ್ಗೆ ಡಾ| ದೇವಿಶೆಟ್ಟಿ ಅಧ್ಯಕ್ಷತೆಯ ತಜ್ಞರ ಸಮಿತಿ ಬುಧ ವಾರ ಸಿಎಂ ಬಿಎಸ್‌ವೈ ಅವರಿಗೆ ವರದಿ ಸಲ್ಲಿಸಿದೆ. ಎ.30ರ ವರೆಗೆ ಎಸಿ ಬಸ್‌ ಸೇವೆ ಮತ್ತು ಮೆಟ್ರೋ ಆರಂಭಿಸದಂತೆ ಶಿಫಾ ರಸು ಮಾಡಿದೆ.

ವರದಿ ಸ್ವೀಕರಿಸಿದ ಸಿಎಂ, ಗುರುವಾರ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಕೇಂದ್ರಕ್ಕೆ ವರದಿ ಸಲ್ಲಿಸುವುದಾಗಿ ತಿಳಿಸಿ ದರು. ತಜ್ಞರ ವರದಿ ಬಗ್ಗೆ ಕೇಂದ್ರದ ಗಮನಕ್ಕೆ ತರಲು ನಿರ್ಧ ರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಜ್ಞರ ಸಮಿತಿ ಶಿಫಾರಸು
-ಸೋಂಕು ಕಂಡುಬಂದ ಪ್ರದೇಶಗಳಲ್ಲಷ್ಟೇ ಲಾಕ್‌ ಡೌನ್‌ ವಿಸ್ತರಣೆ.
– ಸಾಮಾಜಿಕ ಅಂತರ ಕಟ್ಟುನಿಟ್ಟು.
– ಮೇ 31ರ ವರೆಗೆ ಶಾಲಾ ಕಾಲೇಜುಗಳಿಗೆ ರಜಾ.
– ಎಸಿ ಇಲ್ಲದ ಅಂಗಡಿ ತೆರೆಯುವಿಕೆ.
– ಐಟಿ, ಬಿಟಿ, ಅವಶ್ಯ ಸೇವಾ ಸರಕಾರಿ ಕಚೇರಿ, ಕಾರ್ಖಾನೆಗಳು ಶೇ. 50 ಸಿಬಂದಿಯೊಂದಿಗೆ ಕಾರ್ಯನಿರ್ವಹಣೆ.
– ಅಂತಾರಾಜ್ಯ ಗಡಿಗಳಲ್ಲಿ ಸರಕು ಸಾಗಣೆ ವಾಹನಗಳಿಗೆ ಮಾತ್ರ ಪ್ರವೇಶ.
– ಅಂತಾರಾಜ್ಯ ರೈಲು, ವಿಮಾನ ಸೇವೆ ಸ್ಥಗಿತ ಮುಂದುವರಿಕೆ.
– ಅನಾವಶ್ಯಕ ಓಡಾಟಕ್ಕೆ ಕಡಿವಾಣ.
– ಖಾಸಗಿ ವಾಹನ ಓಡಾಟಕ್ಕೆ ಸಮ-ಬೆಸ ಸಂಖ್ಯೆ ಸೂತ್ರ.

Advertisement

Udayavani is now on Telegram. Click here to join our channel and stay updated with the latest news.

Next