Advertisement

ಸೊರಬದಲ್ಲಿ ಬೆಳ್ಳಂಬೆಳಗ್ಗೆ ರಸ್ತೆಗಿಳಿದ ಸಿಪಿಐ, ಪಿಎಸ್ಐ: ವಾಹನಗಳ ಜಪ್ತಿ

08:50 AM May 10, 2021 | keerthan |

ಸೊರಬ: ರಾಜ್ಯದಲ್ಲಿ ಇಂದಿನಿಂದ ಲಾಕ್ ಡೌನ್ ಮಾದರಿ ಟಫ್ ರೂಲ್ಸ್ ಜಾರಿಯಾಗಿದ್ದು, ಪಟ್ಟಣದಲ್ಲಿ ಬೆಳ್ಳಂಬೆಳಗ್ಗೆ ಅನಗತ್ಯವಾಗಿ ಓಡಾಡುತ್ತಿದ್ದ 15ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

Advertisement

ರಾಜ್ಯದಲ್ಲಿ ಕೋವಿಡ್ ತನ್ನ ಆರ್ಭಟವನ್ನು ಮುಂದುವರೆಸುತ್ತಿದೆ. ಸರ್ಕಾರದ ಆದೇಶದಂತೆ ಎರಡನೇ ಬಾರಿಗೆ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿ ಮಾಡಿದ್ದು, ಅದರಂತೆ ಬೆಳ್ಳಂಬೆಳಗ್ಗೆ ರಸ್ತೆಗಿಳಿದ ಸಿಪಿಐ ಆರ್.ಡಿ. ಮರುಳಸಿದ್ದಪ್ಪ, ಪಿಎಸ್ ಐ ಟಿ.ಬಿ. ಪ್ರಶಾಂತ್ ಕುಮಾರ್, ಪಟ್ಟಣದ ಖಾಸಗಿ ಬಸ್ ನಿಲ್ದಾಣದ ವೃತ್ತ, ಆಂಜನೇಯ ದೇವಸ್ಥಾನದ ವೃತ್ತದಲ್ಲಿ ಅನಾವಶ್ಯಕವಾಗಿ ತಿರುಗುತ್ತಿದ್ದವರಿಗೆ ಲಾಠಿ ರುಚಿ ತೋರಿಸಿದರು.

ಇದನ್ನೂ ಓದಿ:ಲಾಕ್​ಡೌನ್​ : ಉಡುಪಿಯಲ್ಲಿ ಬೆಳ್ಳಂಬೆಳಗ್ಗೆ ಲಾಠಿ ಹಿಡಿದು ಫೀಲ್ಡ್​ಗಿಳಿದ ಪೊಲೀಸರು

ಇನ್ನು ಕೆಲವರು ಔಷಧ, ಹಾಲು ಆಸ್ಪತ್ರೆಯ ನೆಪದಲ್ಲಿ ಓಡಾಡುತ್ತಿದ್ದವರಿಗೂ ಕಡಿವಾಣ ಬಿದ್ದಿತು. ಪಟ್ಟಣದ ಜನತೆ ತರಕಾರಿ, ಹಣ್ಣು, ಹಾಲು ಕೊಳ್ಳಲು ನಡೆದುಕೊಂಡು ಹೋಗುತ್ತಿದ್ದ ದೃಶ್ಯವೂ ಕಂಡುಬಂದಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next