Advertisement

ಮಂಚದಡಿ ಬಾಂಬ್‌ ಇಟ್ಟು ಹತ್ಯೆ

09:09 AM Feb 14, 2018 | Harsha Rao |

ಹೈದರಾಬಾದ್‌: ರಾಜಕೀಯ ಪ್ರತಿಸ್ಪರ್ಧಿಗಳನ್ನು ಕೊಲ್ಲಲು ಬಾಂಬ್‌ ಅಥವಾ ಸ್ಫೋಟಕಗಳನ್ನು ವಾಹನಗಳಲ್ಲಿಯೋ ಅಥವಾ ವೇದಿಕೆಯಲ್ಲಿಯೋ ಇಡಲಾಗುತ್ತದೆ. ಆದರೆ ಆಂಧ್ರಪ್ರದೇಶದ ನಲ್ಗೊಂಡಾ ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಸ್ಥಳೀಯ ನಾಯಕನನ್ನು ಅವರು ಮಲಗುತ್ತಿದ್ದ ಮಂಚದ ಕೆಳಗೇ ಬಾಂಬ್‌ ಇರಿಸಿ ಹತ್ಯೆ ಮಾಡಲಾಗಿದೆ. ಜಿಲ್ಲೆಯ ಚಿಂತಾಲಪಾಲೆಂ ಗ್ರಾಮದಲ್ಲಿ ಉಪಾಧ್ಯಕ್ಷ ಮತ್ತು ಸ್ಥಳೀಯ ಕಾಂಗ್ರೆಸ್‌ ನಾಯಕ ಧರ್ಮ ನಾಯಕ್‌ ಈ ರೀತಿಯಾಗಿ ದುರ್ಮರಣಕ್ಕೀಡಾದ ವ್ಯಕ್ತಿ. ಸೋಮವಾರ ತಡರಾತ್ರಿ 2.30ಕ್ಕೆ ನಲ್ಗೊಂಡಾದ ಚಿಂತಾಲ ಪಾಲೆಂ ಗ್ರಾಮದಲ್ಲಿ ಈ ಘಟನೆ ನಡೆದಿದೆ.

Advertisement

ಪೊಲೀಸರ ಪ್ರಕಾರ ಇದು ರಾಜಕೀಯ ದ್ವೇಷದ ಕೃತ್ಯವಲ್ಲ. ಆತನ ಎರಡನೇ ಪತ್ನಿ ಸಿರೀಶಾ ಮೇಲೆ ಸಂಶಯ ವ್ಯಕ್ತವಾಗಿದೆ. ಮೃತನ ತಾಯಿ ನೀಡಿದ ದೂರಿನ ಆಧಾರದಲ್ಲಿ ಕೇಸು ದಾಖಲಿಸಲಾಗಿದ್ದು, ಪತ್ನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಮಂಚದ ಕೆಳಗೆ ಬಾಂಬ್‌ ಇರಿಸಲಾಗಿತ್ತು. ಸ್ಫೋಟದ‌ ರಭಸಕ್ಕೆ ದೇಹ ಛಿದ್ರವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next