Advertisement

ಸೋಂಕಿಂದ ಮೃತಪಟ್ಟ ಬಿಪಿಎಲ್‌ ಕುಟುಂಬಕ್ಕೆ 10 ಸಾವಿರ ರೂ.

01:21 PM Apr 25, 2021 | Team Udayavani |

ದೇವನಹಳ್ಳಿ: ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್‌.ನಾಗೇಶ್‌ 2021-22ನೇ ಸಾಲಿನ ಆಯವ್ಯಯವನ್ನು ಮಂಡಿಸಿದರು.

Advertisement

ಬಜೆಟ್‌ನ ಮೊತ್ತ 26.79 ಕೋಟಿ ರೂ. ಆಗಿದ್ದು, ವೆಚ್ಚ 26.28 ಕೋಟಿ ರೂ., ಉಳಿತಾಯ 51 ಲಕ್ಷ ರೂ. ಆಗಿದೆ. ಬಜೆಟ್‌ ಮಂಡಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್‌.ನಾಗೇಶ್‌ ಮಾತನಾಡಿ, ಪಟ್ಟಣದ ಸರ್ವತೋ ಮುಖ ಅಭಿವೃದ್ಧಿಗಾಗಿ ಮೂಲ ಸೌಕರ್ಯಕ್ಕೆ ಒತ್ತು, ಕುಡಿಯುವ ನೀರಿನ ಪೂರೈಕೆ ಸೇರಿ ಅಭಿವೃದ್ಧಿಗೆ ಪೂರಕ ಬಜೆಟ್‌ ಮಂಡಿಸಲಾಗಿದೆ ಎಂದರು.

ಕೊರೊನಾ ಸೋಂಕಿನಿಂದ ಮೃತಪಟ್ಟ ಬಿಪಿಎಲ್‌ ಕುಟುಂಬದವರಿಗೆ 10 ಸಾವಿರ ರೂ. ಸಹಾಯಧನ ವಿತರಣೆ, ನೀರಿನ ಘಟಕಗಳ ಸ್ಥಾಪನೆ, ಅಗತ್ಯವಿರುವ ಕಡೆ ಹೆಚ್ಚುವರಿ ಆಗಿ 2 ಘಟಕ ಸ್ಥಾಪನೆ. ಕೆರೆಸುತ್ತಲು ವಾಯುವಿಹಾರಕ್ಕಾಗಿ ಪಾದಚಾರಿ ಮಾರ್ಗ, ಉದ್ಯಾನ ನಿರ್ಮಿಸಿ ವ್ಯಾಯಾಮ ಸಲಕರಣೆಗಳನ್ನು ಅಳವಡಿಸಲಾಗುವುದು ಎಂದು ಹೇಳಿದರು.

ಮುಕ್ತಿವಾಹನ ಮತ್ತು ಶವಸಂಸ್ಕಾರ ಪೆಟ್ಟಿಗೆಸೌಲಭ್ಯ ಕಲ್ಪಿಸಲಾಗುವುದು. ಪುರಸಭಾ ಕಚೇರಿಯ ಮುಂಭಾಗದಲ್ಲಿ 4 ಅಂತಸ್ತಿನ ವಾಣಿಜ್ಯ ಕಟ್ಟಡಸಂಕೀರ್ಣ, ಸಮಾರಂಭ ಹಾಗೂ ಸಭಾಂಗಣ ನಿರ್ಮಿಸುವುದು. ಜನಸಂದಣಿ, ಅಪಘಾತವಲಯಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ, ಘನತ್ಯಾಜ್ಯ ವಿಲೇವಾರಿ ಬಗ್ಗೆ ಅರಿವು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದ ಅನುದಾನದಡಿಯಲ್ಲಿ ಕೆಂಪೇಗೌಡ ಸರ್ಕಲ್‌ನಿಂದಪಟ್ಟಣದ ಮೂಲಕ ರಾಣಿಸರ್ಕಲ್‌ವರೆಗೆ ರಸ್ತೆ ಮತ್ತು ಪಾದಚಾರಿ ಅಭಿವೃದ್ಧಿಗೊಳಿಸಲಾಗುವುದುಸೇರಿದಂತೆ ವಿವಿಧ ಕಾರ್ಯಕ್ರಮಗಳ ಮಾಹಿತಿ ನೀಡಿದರು.

ಕೂಡಲೇ ಖರೀದಿಸಿ: ಪುರಸಭಾ ಸದಸ್ಯ ಜಿ.ಎ. ರವೀಂದ್ರ ಮಾತನಾಡಿ, ಬಜೆಟ್‌ನಲ್ಲಿ ಮಂಡಿಸಿರುವ ಎಲ್ಲಾ ಕಾರ್ಯಕ್ರಮಗಳು ಕಾರ್ಯಗತವಾಗಬೇಕು. ಮೊದಲು ಮುಕ್ತಿ ವಾಹನ, ಶವ ಸಂಗ್ರಹಣ ಪೆಟ್ಟಿಗೆ ಕಾರ್ಯವನ್ನು ಜರೂರಾಗಿ ಮಾಡಬೇಕು. ಘೋಷಣೆ ಯಾಗಿ ಉಳಿಯಬಾರದು ಎಂದು ಸಭೆಯಲ್ಲಿ ಗಮನಕ್ಕೆ ತಂದರು.

Advertisement

ಅವ್ಯವಹಾರ ಆಗಬಾರದು: ಪುರಸಭಾ ಸದಸ್ಯ ಎನ್‌.ರಘು ಮಾತನಾಡಿ, ಕೋವಿಡ್‌-19 ಕಾಯಿಲೆಯಿಂದ ಮರಣಹೊಂದಿರುವ ಬಿಪಿಎಲ್‌ ಬಡಕುಟುಂಬಗಳಿಗೆ 10 ಸಾವಿರ ರೂ. ವಿಳಂಬ ಮಾಡದೆ ನೀಡಬೇಕು. ಅರ್ಹರಿಗೆ ತಲುಪಿಸುವಕೆಲಸವಾಗಬೇಕು. ಇದರಲ್ಲಿ ಯಾವುದೇ ಅವ್ಯವಹಾರ ಆಗಬಾರದು ಎಂದು ವಿವರಿಸಿದರು.

ಮುಕ್ತಿ ವಾಹನ, ಶವಪೆಟ್ಟಿಗೆ ಖರೀದಿ: ಮುಖ್ಯಾಧಿಕಾರಿ ಎ.ಎಚ್‌.ನಾಗರಾಜ್‌ ಮಾತನಾಡಿ, ಮುಕ್ತಿ ವಾಹನ ಮತ್ತು ಶವ ಸಂಸ್ಕರಣಾ ಪೆಟ್ಟಿಗೆ ಖರೀದಿಸಲು ಸದಸ್ಯರ ಸಭೆ ಕರೆದು ತೀರ್ಮಾನದ ಪತ್ರ ಕಳುಹಿಸಿಕೊಡುವಂತೆ ಡೀಸಿ ತಿಳಿಸಿದ್ದಾರೆ. ಆನ್‌ ಲೈನ್‌ನಲ್ಲಿ ಟೆಂಡರ್‌ ಪ್ರಕ್ರಿಯೆ ನಡೆಸಿ, ಕೂಡಲೇ ಮುಕ್ತಿವಾಹನ ಮತ್ತು ಶವ ಸಂಸ್ಕರಣಾ ಪೆಟ್ಟಿಗೆ ಖರೀದಿಸಲಾಗುವುದು ಎಂದು ಹೇಳಿದರು.

ಪುರಸಭಾ ಉಪಾಧ್ಯಕ್ಷೆ ಪುಷ್ಪಲತಾ ಲಕ್ಷ್ಮೀ ನಾರಾಯಣ್‌ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆಯಲ್ಲಿ ಸದಸ್ಯರಾದ ಜಿ.ಎ.ರವೀಂದ್ರ, ರತ್ನಮ್ಮ ರವಿಕುಮಾರ್‌, ಎನ್‌.ರಘು, ಎಸ್‌.ಸಿ.ಚಂದ್ರಪ್ಪ, ಮಂಜುನಾಥ್‌, ಬಾಲರಾಜ್‌, ಮುನಿಕೃಷ್ಣ,ಗೋಪಿ, ಲಕ್ಷ್ಮೀ ಅಂಬರೀಶ್‌, ರುದ್ರೇಶ್‌, ಗೀತಾಶ್ರೀಧರ್‌, ಲೀಲಾವತಿ ಶಿವಕುಮಾರ್‌, ಕೋಮಲಾ, ಸುಮಿತ್ರಾ ಸಿಬ್ಬಂದಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next