Advertisement

ಕೋವಿಡ್ ಆರ್ಥಿಕ ಸಂಕಷ್ಟದಿಂದ ತಪ್ಪಿಸಲು 30 ಲಕ್ಷ ರೈತರಿಗೆ ಸಾಲ ಭಾಗ್ಯ 

02:24 AM Apr 07, 2021 | Team Udayavani |

ಬೆಂಗಳೂರು : ರೈತರಿಗೆ ಕೊರೊನಾ ಆರ್ಥಿಕ ಸಂಕಷ್ಟ ತಟ್ಟದಂತೆ ನೋಡಿಕೊಳ್ಳಲು ರಾಜ್ಯ ಸರಕಾರ ಮುಂದಾಗಿದ್ದು, ಪ್ರಸಕ್ತ ವರ್ಷ 30 ಲಕ್ಷ ರೈತರಿಗೆ 20 ಸಾವಿರ ಕೋ.ರೂ. ಬೆಳೆ ಸಾಲ ವಿತರಿಸಲು ಸಜ್ಜಾಗಿದೆ.

Advertisement

ಕೃಷಿ ಸಾಲಕ್ಕಾಗಿ ನಬಾರ್ಡ್‌ನಿಂದ ದೊರೆಯುವ ಮರು ಹಣಕಾಸು ನೆರವನ್ನು ಈಗಿರುವ ಶೇ. 35ರಿಂದ ಶೇ. 50ಕ್ಕೆ ಹೆಚ್ಚಿಸುವಂತೆ ಕೇಂದ್ರಕ್ಕೆ ಮನವಿ ಮಾಡಲು ಸರಕಾರ ತೀರ್ಮಾನಿಸಿದೆ. ರೈತರಲ್ಲಿ ಬೆಳೆ ಸಾಲ ವಿಚಾರವಾಗಿ ಆತಂಕ ಮೂಡದಂತೆ ನೋಡಿಕೊಳ್ಳಲು ಡಿಸಿಸಿ ಬ್ಯಾಂಕ್‌ ಅಧ್ಯಕ್ಷರ ಸಭೆಯಲ್ಲೂ ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಡಿಸಿಸಿ ಬ್ಯಾಂಕ್‌ ಮತ್ತು ಅಪೆಕ್ಸ್‌ ಬ್ಯಾಂಕ್‌ಗಳಿಂದ ಸಾಲ ಮನ್ನಾ ಕುರಿತು ಬರುವ ಕ್ಲೈಮ್‌ಗಳಿಗೆ ತತ್‌ಕ್ಷಣ ಹಣಕಾಸು ಬಿಡುಗಡೆ ಮಾಡುವಂತೆ ಆರ್ಥಿಕ ಇಲಾಖೆಗೆ ನಿರ್ದೇಶನ ನೀಡಬೇಕೆಂದು ಸಿಎಂಗೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ.

3 ಲಕ್ಷ ಹೊಸ ರೈತರಿಗೆ ಸಾಲ
ಈ ಮಧ್ಯೆ ಸಹಕಾರ ಇಲಾಖೆಯು 2020- 21ನೇ ಸಾಲಿನಲ್ಲಿ 1.31 ಲಕ್ಷ ರೈತರಿಗೆ 1,960 ಕೋ.ರೂ. ಸಾಲ ನೀಡಿದೆ. 24.36 ಲಕ್ಷ ರೈತರಿಗೆ 15,300 ಕೋ.ರೂ. ಸಾಲ ನೀಡುವ ಗುರಿ ಇತ್ತಾದರೂ 25.67 ಲಕ್ಷ ರೈತರಿಗೆ 17,260 ಕೋಟಿ ರೂ. ಸಾಲ ನೀಡಲಾಗಿದೆ. 2021-22ರ ಸಾಲಿನಲ್ಲಿ 30 ಲಕ್ಷ ರೈತರಿಗೆ 20 ಸಾವಿರ ಕೋ.ರೂ. ಸಾಲ ನೀಡುವ ಗುರಿ ಇದ್ದು, ಹೊಸ ದಾಗಿ 3 ಲಕ್ಷ ರೈತರಿಗೆ ಸಾಲ ನೀಡುವ ಉದ್ದೇಶ ವಿದೆ ಎಂದು ಇಲಾಖೆ ತಿಳಿಸಿದೆ. ಬೆಳೆ ಸಾಲ ಮನ್ನಾ ದಡಿ ತಡೆಹಿಡಿದಿದ್ದ ಸುಮಾರು 1 ಲಕ್ಷ ರೈತರ ಸಾಲ ಮನ್ನಾವನ್ನು ಕೂಡ ಚುಕ್ತಾ ಮಾಡಲಾಗಿದೆ.

ಬೆಳೆ ಸಾಲ ವಿತರಣೆಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು. ಈ ವರ್ಷ 20 ಸಾವಿರ ಕೋ.ರೂ. ವರೆಗೆ ಸಾಲ ವಿತರಿಸುವ ಗುರಿ ಹೊಂದಿದ್ದೇವೆ.
– ಎಸ್‌.ಟಿ. ಸೋಮಶೇಖರ್‌, ಸಹಕಾರ ಸಚಿವ

Advertisement

– ಎಸ್‌. ಲಕ್ಷ್ಮೀನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next