Advertisement

Belthangady ಯುವಕನ ಆತ್ಮಹತ್ಯೆ ಹಿಂದೆ ಲೋನ್‌ ಆ್ಯಪ್‌ ಬ್ಲ್ಯಾಕ್‌ಮೇಲ್ ಸಂಶಯ?

12:13 AM Sep 02, 2023 | Team Udayavani |

ಬೆಳ್ತಂಗಡಿ: ಪುದುವೆಟ್ಟು ಗ್ರಾಮದ ಬಾಯತ್ಯಾರು ನಿವಾಸಿ ಸ್ವರಾಜ್(24) ಆ. 31ರಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ಲೋನ್‌ಆ್ಯಪ್‌ನ ಕಿರುಕುಳ ಕಾರಣ ಎನ್ನುವ ಸಂಶಯ ವ್ಯಕ್ತವಾಗತೊಡಗಿದೆ.

Advertisement

ಅತ್ಯುತ್ತಮ ಕಬಡ್ಡಿ ಆಟಗಾರನಾಗಿದ್ದ ಸ್ವರಾಜ್‌ ಉಜಿರೆಯ ಖಾಸಗಿ ಉದ್ಯಮ ಒಂದರಲ್ಲಿ ನೌಕರರಾಗಿದ್ದರು. ಪ್ರಸ್ತುತ ಧರ್ಮಸ್ಥಳದಲ್ಲಿ ವಾಸವಿದ್ದ ಅವರು ಪುದುವೆಟ್ಟಿನ ತಮ್ಮ ಹಳೆಯ ಮನೆಯ ಸ್ನಾನಗೃಹದಲ್ಲಿ ನೇಣಿಗೆ ಶರಣಾಗಿದ್ದರು.

ಆನ್‌ಲೈನ್‌ ಲೋನ್‌ಆ್ಯಪ್‌ ಕಂಪೆನಿ ಯಿಂದ ಸಾಲ ಪಡೆದಿದ್ದ ಅವರಿಗೆ ಹಂತ ಹಂತವಾಗಿ ಹೆಚ್ಚುವರಿ ಹಣ ಪಾವತಿಸುವಂತೆ ಬೆದರಿಕೆ ಹಾಕಲಾ ಗುತ್ತಿತ್ತು. ಈತನ ಗೆಳೆಯರಿಗೂ ಅನಗತ್ಯ ಸಂದೇಶಗಳನ್ನು ಕಳುಹಿಸಲಾಗುತ್ತಿತ್ತು ಎಂಬ ಮಾಹಿತಿ ಹರಿದಾಡುತ್ತಿದ್ದು, ಪೊಲೀಸರು ಈ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದಾರೆ.

ಸ್ವರಾಜ್‌ ಹಣವನ್ನು ಲೋನ್‌ಆ್ಯಪ್‌ ಕಂಪೆನಿಗೆ ಪಾವತಿಸಿದ್ದರೂ, ಹೆಚ್ಚುವರಿ ಹಣಕ್ಕೆ ಬೇಡಿಕೆ ಬರುತ್ತಿದ್ದ ಕಾರಣದಿಂದ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನುವ ಆಯಾಮದಲ್ಲಿ ಪೊಲೀಸರ ತನಿಖೆ ಮುಂದುವರಿದಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next