Advertisement

ಶಿವಸೇನೆಯಿಂದ 21 ಕ್ಷೇತ್ರಗಳ ಪಟ್ಟಿ ಪ್ರಕಟ

07:45 AM Apr 15, 2018 | Team Udayavani |

ಹುಬ್ಬಳ್ಳಿ: ಶಿವಸೇನೆ ಕರ್ನಾಟಕ ಪಕ್ಷದಿಂದ ರಾಜ್ಯ ವಿಧಾನಸಭೆಗೆ ಸ್ಪರ್ಧಿಸುವ 21 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. 

Advertisement

ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಪಕ್ಷದ ಕರ್ನಾಟಕ ಪ್ರಮುಖ ಸಿದ್ದಲಿಂಗೇಶ್ವರ ಆಂದೋಲ ಸ್ವಾಮೀಜಿ ಪಟ್ಟಿ ಬಿಡುಗಡೆ ಮಾಡಿದರು. ಕುಮಾರ ಹಕಾರಿ (ಹು-ಧಾ ಕೇಂದ್ರ), ಈರಣ್ಣ ಕಾಳೆ (ಕಲಘಟಗಿ), ಈಶ್ವರಗೌಡರ ಪಾಟೀಲ (ಧಾರವಾಡ), ದಾನು ದಾನಪ್ಪಗೌಡರ (ನರಗುಂದ), ಹೇಮಂತ ಜಾನಕೇರೆ (ಹಾಸನ), ಮಹೇಶಕುಮಾರ ಕೊಪ್ಪ (ಶೃಂಗೇರಿ), ಮಧುಕರ ಮುದ್ರಾಡಿ (ಉಡುಪಿ ನಗರ), ಆನಂದ ಶೆಟ್ಟಿ ಅಡ್ಡಿಯಾರ (ಮಂಗಳೂರು), ಟಿ.ಜಯಕುಮಾರ (ಹೆಬ್ಟಾಳ), ಸಂತೋಷಕುಮಾರ ಬೈರಟ್ಟಿ (ತಿಪಟೂರ), ಕೆ.ಬಾಲಪ್ಪ (ಕನಕಗಿರಿ), ವಾಸುದೇವ ಪಾರಸ್‌ (ಜಮಖಂಡಿ), ವಿಜಯಕುಮಾರ ಪಾಟೀಲ (ಯಾದಗಿರಿ), ರಾಜಾಪಿಡ್ಡ ನಾಯಕ (ಸುರಪುರ), ರಾಜಚಂದ್ರ ರಾಮನಗೌಡ (ರಾಯಚೂರ), ಆಕಾಶ (ಶಿರಸಿ), ಜಯಶಂಕರ ವಣ್ಣೂರ (ಸವದತ್ತಿ), ತಾವರಸಿಂಗ್‌ ಠಾಕೂರ (ಕುಡಚಿ), ಸುಭಾಸಬಾಬು ಕಾಸರಕರ (ಹುಕ್ಕೇರಿ), ವೆಂಕಟರಾವ ಬಿರಾದರ (ಭಾಲ್ಕಿ), ಪ್ರದೀಪ ಅಮರಣ್ಣವರ (ಹುನಗುಂದ) ಸ್ಪರ್ಧಿಸಲಿದ್ದಾರೆ ಎಂದರು. ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್‌ ಈ ವೇಳೆ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next