Advertisement

ಲಿಂಗಾಯತರಿಗೆ ಲಿಂಗಾಯತರೇ ವಿರೋಧಿಗಳು

06:10 AM Nov 26, 2018 | Team Udayavani |

ಬಸವಕಲ್ಯಾಣ: ನಗರದ ಅನುಭವ ಮಂಟಪದ ಆವರಣದಲ್ಲಿ ಭಾನುವಾರ 39ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಸಮಾರಂಭಕ್ಕೆ ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿ ಚಾಲನೆ ನೀಡಿದರು.

Advertisement

ಬಳಿಕ ಮಾತನಾಡಿದ ಶ್ರೀಗಳು, ಭಾರತ ಸುಂದರವಾಗಿ ಕಾಣಲು ಹಾಗೂ ಶಾಂತಿ ನೆಲೆಸುವ ನಿಟ್ಟಿನಲ್ಲಿ ಬಸವ ತತ್ವ ಸಾಧಕರ ತರಬೇತಿ ಕೇಂದ್ರಕ್ಕೆ ಮಕ್ಕಳನ್ನು ಸಮರ್ಪಣೆ ಮಾಡುವುದು ಪ್ರಸಕ್ತ ದಿನಗಳಲ್ಲಿ ತುಂಬಾ ಅವಶ್ಯಕವಾಗಿದೆ. 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಸಮಾಜದಲ್ಲಿ ಶಾಂತಿ-ನೆಮ್ಮದಿ ನೆಲೆಸುವುದಕ್ಕಾಗಿ ದೇಶ ತಿರುಗಾಡಿಲ್ಲ. ಬದಲಾಗಿ ಅವರು ಬರೆದಿರುವ ವಚನಗಳು ದೇಶಾದ್ಯಂತ ಹರಿದಾಡಿದ್ದವು. ಹೀಗಾಗಿ ನಾವು ವಚನಗಳನ್ನು ಇನ್ನೂ ಹೆಚ್ಚಾಗಿ ಪ್ರಚಾರ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಸಮಾರಂಭದಲ್ಲಿ ಡಾ| ಎಂ.ಎಂ.ಕಲಬುರ್ಗಿ ರಾಷ್ಟ್ರೀಯ ಸಾಹಿತ್ಯ ಸಂಶೋಧನಾ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ| ಎಸ್‌.ಎಂ.ಜಾಮದಾರ್‌, ಲಿಂಗಾಯತರು ವೀರಶೈವರ ವಿರೋಧಿಗಳಲ್ಲ ಮತ್ತು ಯಾವ ಧರ್ಮದ ವೈರಿಗಳೂ ಅಲ್ಲ. ಆದರೆ, ಲಿಂಗಾಯತರಲ್ಲಿ ಅನೇಕರು ಪ್ರತ್ಯೇಕ ಧರ್ಮಿಯರಾದರೂ ಕಾನೂನು ಪ್ರಕಾರ ಅವರು ಲಿಂಗಾಯತರೇ ಆಗಿದ್ದಾರೆ ಎನ್ನುವುದಕ್ಕೆ ಸಾಕಷ್ಟು ಪುರಾವೆಗಳಿವೆ. ಲಿಂಗಾಯತ ಹೊಸ ಧರ್ಮವಲ್ಲ. 850 ವರ್ಷಗಳಿಂದ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಭಾರತದ ಏಳು ರಾಜ್ಯಗಳಲ್ಲಿ ಅಸ್ತಿತ್ವದಲ್ಲಿದೆ. ದೇಶದಲ್ಲಿ ಕೊಟ್ಯಂತರ ಸಂಖ್ಯೆಯಲ್ಲಿ ಲಿಂಗಾಯತರು ಇದ್ದು, ತನ್ನದೇ ಆದ ವಿಶಿಷ್ಟ ಸಿದಾಟಛಿಂತ, ತತ್ವ ದರ್ಶನ ಹಾಗೂ ಆಚರಣೆಗಳನ್ನು ಹೊಂದಿರುವ ಪ್ರತ್ಯೇಕ ಧರ್ಮವಾಗಿದೆ.

ಲಿಂಗಾಯತ ಧರ್ಮವು ಜೈನ, ಬೌದ್ಧ ಮತ್ತು ಸಿಖ್‌ ಧರ್ಮಕ್ಕಿಂತ ವಿಭಿನ್ನವಾಗಿದೆ. ಅದೇ ಆಧಾರದ ಮೇಲೆ ಲಿಂಗಾಯತರು ತಮ್ಮ ಸಮುದಾಯವನ್ನು ಪ್ರತೇಕ ಅಲ್ಪಸಂಖ್ಯಾತರ ಧರ್ಮವೆಂದು ಘೋಷಿಸಲು ಹೋರಾಟ ನಡೆಸುತ್ತಿದ್ದಾರೆ ಎಂದರು.

ರಾಜ್ಯದಲ್ಲಿ ಮೂರು ಕೋಟಿ ಜನಸಂಖ್ಯೆಯಲ್ಲಿರುವ ನಮಗೆ ನಮ್ಮ ಧರ್ಮ ಆಚರಣೆ ಮಾಡಲು ಸಂವಿಧಾನ ಹಕ್ಕು ನೀಡಿದೆ. ಆದರೆ ಲಿಂಗಾಯತರಿಗೆ ಲಿಂಗಾಯತರೇ ವಿರೋಧಿಗಳಾಗಿದ್ದಾರೆ. ಹೀಗಾಗಿ ನಮ್ಮ ಹೋರಾಟಕ್ಕೆ ಹಿನ್ನಡೆ ಆಗುತ್ತಿದೆ ಎಂದರು.

Advertisement

ಸಾನ್ನಿಧ್ಯ ವಹಿಸಿದ್ದ ಡಾ| ಬಸವಲಿಂಗ ಪಟ್ಟದೇವರು ಮಾತನಾಡಿ, ಕಳೆದ ಅನುಭವ ಮಂಟಪ ಉತ್ಸವ ಉದ್ಘಾಟಿಸಿದ ವೇಳೆ ಎಚ್‌.ಡಿ. ಕುಮಾರಸ್ವಾಮಿ ಅವರು ರಾಜ್ಯದಲ್ಲಿ ನಾವು ಅ ಧಿಕಾರಕ್ಕೆ ಬಂದರೆ ನೂತನ ಅನುಭವ ಮಂಟಪ ನಿರ್ಮಾಣ ಮಾಡಲು ಒಂದೇ ಕಂತಿನಲ್ಲಿ ಹಣ ಬಿಡುಗಡೆ ಮಾಡುತ್ತೇವೆ. ಅಲ್ಲದೆ, ಇಲ್ಲಿ ಸಂಪುಟ ಸಭೆ ಆಯೋಜಿಸಲಾಗುವುದು ಎಂದು ಭರವಸೆ ನೀಡಿದ್ದರು.

ಆದರೆ ಆಡಿದ ಮಾತಿನಂತೆ ಕುಮಾಸ್ವಾಮಿ ನಡೆದುಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ನೇಕಾರ ಸಮುದಾಯ ಒಕ್ಕೂಟ ರಾಜ್ಯಾಧ್ಯಕ್ಷ ಎಂ.ಡಿ.ಲಕ್ಷ್ಮೀ ನಾರಾಯಣ, ಶಾಸಕ ಬಿ.ನಾರಾಯಣರಾವ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next