ಮಂಗಳೂರು / ಉಡುಪಿ: ಅರಬ್ಬಿ ಸಮುದ್ರ ಮತ್ತು ಬಂಗಾಲಕೊಲ್ಲಿಯ ನೈಋತ್ಯ ಭಾಗದಲ್ಲಿ ಮೇಲ್ಮೆ „ ಸುಳಿಗಾಳಿ ಬೀಸುತ್ತಿರುವುದರಿಂದ ಬುಧವಾರ ಕರಾವಳಿಯಾದ್ಯಂತ ಮೋಡ ಮುಸುಕಿದ ವಾತಾವರಣವಿದ್ದು, ವಿವಿಧೆದೆ ಲಘು ಮಳೆಯಾಗಿದೆ.
ಮಂಗಳೂರು ನಗರ, ಪುತ್ತೂರು, ಮಲ್ಪೆ, ಪಡುಬಿದ್ರಿ, ಪುಂಜಾಲಕಟ್ಟೆ, ಕಾಪು, ಉಡುಪಿ, ಹೆಬ್ರಿ, ಕಾರ್ಕಳ, ಹಳೆಯಂಗಡಿ, ಸುಬ್ರಹ್ಮಣ್ಯ, ಶಿರ್ವ ಪರಿಸರದಲ್ಲಿ ಬೆಳಗ್ಗಿನಿಂದಲೇ ಮೋಡ ಮುಸು ಕಿದ ವಾತಾ ವರಣವಿತ್ತು. ಕುಂದಾಪುರ, ಪಡುಬಿದ್ರಿ, ಬೈಕಂಪಾಡಿ, ಮೂಡಬಿದಿರೆ, ಬೆಳ್ತಂಗಡಿ, ಉಡುಪಿ, ಬಾಕೂìರು, ತೆಕ್ಕಟ್ಟೆ, ಕೋಟ ಪರಿಸರದಲ್ಲಿ ತುಂತುರು ಮಳೆಯಾಗಿದೆ. ಬೆಳ್ಮಣ್ಣು ಮುಂಡ್ಕೂರು ಪರಿಸರದಲ್ಲಿ ಉತ್ತಮ ಮಳೆ ಯಾಗಿದೆ. ನಗರದಲ್ಲಿ ಉಷ್ಣಾಂಶದಲ್ಲಿಯೂ ಸ್ವಲ್ಪ ಏರುಪೇರಾಗಿದೆ.
ಹವಾಮಾನ ಇಲಾಖೆಯ ಅಂಕಿ ಅಂಶದ ಪ್ರಕಾರ ಪಣಂಬೂರಿನಲ್ಲಿ ಮಂಗಳವಾರ ಕನಿಷ್ಠ 20.6 ಡಿಗ್ರಿ ಸೆಲ್ಸಿಯಸ್, ಗರಿಷ್ಠ 34.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ಬುಧವಾರ ಕನಿಷ್ಠ 22.6 ಡಿಗ್ರಿ ಸೆಲ್ಸಿಯಸ್, ಗರಿಷ್ಠ 33.9 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರದಂದು ಕನಿಷ್ಠ 22 ಡಿ. ಸೆ., ಗರಿಷ್ಠ 34.6 ಡಿ.ಸೆ., ಬುಧವಾರದಂದು ಕನಿಷ್ಠ 22.6 ಡಿ. ಸೆ., ಗರಿಷ್ಠ 33.4 ಡಿ. ಸೆ. ಉಷ್ಣಾಂಶ ದಾಖಲಾಗಿದೆ.
ಕೊಲ್ಲೂರು, ಬೈಂದೂರು, ವಂಡ್ಸೆ, ಬಿಜೂರು, ಕಂಬದಕೋಣೆ, ನಾವುಂದ, ಉಪ್ಪುಂದ, ಮರವಂತೆ, ತೆಕ್ಕಟ್ಟೆ, ಸಿದ್ದಾ ಪುರ, ಶಂಕರನಾರಾಯಣ ಕಡೆ ಗಳಲ್ಲಿ ಬುಧವಾರ ಬೆಳಗ್ಗೆನಿಂದಲೇ ಮೋಡ ಕವಿದ ವಾತಾವರಣವಿದ್ದು, ಮಧ್ಯಾಹ್ನ ದಿಂದ ಸಂಜೆವರೆಗೆ ನಿರಂತರ ವಾಗಿ ಹನಿ ಹನಿ ಮಳೆಯಾಗಿತ್ತು. ಸಾಮಾನ್ಯವಾಗಿ ಬೆಳಗ್ಗೆ ಹಾಗೂ ರಾತ್ರಿ ವೇಳೆ ಚಳಿ ಇದ್ದು, ಹಗಲು ಹೊತ್ತು ವಿಪರೀತ ಸೆಕೆ ಇರುತ್ತಿತ್ತು. ಆದರೆ ಬುಧವಾರ ಬೆಳಗ್ಗಿನಿಂದಲೇ ತಣ್ಣಗಿನ ವಾತಾವರಣವಿತ್ತು. ಸಂಜೆಯವರೆಗೂ ಸತತವಾಗಿ ತುಂತುರು ಮಳೆ ಸುರಿಯುತ್ತಲೇ ಇತ್ತು.
ಮಾವು, ಗೇರಿಗೆ ಸಮಸ್ಯೆ
ಮೋಡದ ವಾತಾವರಣ ಸೃಷ್ಟಿಯಾಗಿರುವುದರಿಂದ ಮಾವು ಮತ್ತು ಗೇರು ಹಣ್ಣಿನ ಮರದ ಹೂವು ಕರಟಿ ಹೋಗುವ ಸಾಧ್ಯತೆಗಳು ಹೆಚ್ಚಾಗಿವೆ. ಮರವಿಡೀ ಹೂ ಬಿಟ್ಟು ಶೃಂಗಾರಗೊಂಡಿದ್ದನ್ನು ಕಂಡು ಹರ್ಷಗೊಂಡಿದ್ದ ಬೆಳೆಗಾರರ ಮುಖದಲ್ಲಿ ಈಗ ದುಗುಡ ತುಂಬಿದೆ.
ಇಂದೂ ತುಂತುರು ಮಳೆ ಸಾಧ್ಯತೆ
ಗುರುವಾರ ಕೂಡ ಕರಾವಳಿಯ ಕೆಲವು ಪ್ರದೇಶಗಳಲ್ಲಿ ಚದುರಿದ ಮಳೆಯಾಗಲಿದೆ. ಕೆಲವು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ಮುಂದಿನ ದಿನಗಳಲ್ಲಿ ಗರಿಷ್ಠ ತಾಪಮಾನ ಇಳಿಕೆಯಾಗಲಿದ್ದು, ಕನಿಷ್ಠ ತಾಪಮಾನ ಏರಿಕೆ ಯಾಗಲಿದೆ ಎಂದು ಹವಾಮಾನ ಇಲಾಖೆಯ ನಿರ್ದೇಶಕ ಸುಂದರ ಎಂ. ಮೇತ್ರಿ “ಉದಯವಾಣಿ’ಗೆ ತಿಳಿಸಿದ್ದಾರೆ.