Advertisement

ಗ್ಯಾಸ್‌ ಸಿಲೆಂಡರ್‌ ಎತ್ತಿ ಹಾಕಿ ಪತ್ನಿ ಕೊಲೆ

12:13 PM Jan 15, 2022 | Team Udayavani |

ಕಲಬುರಗಿ: ಪತ್ನಿ ತಲೆ ಮೇಲೆ ಪತಿಯೇ ಗ್ಯಾಸ್‌ ಸಿಲೆಂಡರ್‌ ಎತ್ತಿ ಹಾಕಿ ಧಾರುಣವಾಗಿ ಕೊಲೆ ಮಾಡಿದ ಘಟನೆ ನಗರದ ಕೋಟನೂರ ಜಿಡಿಎ ಬಡಾವಣೆ ಹತ್ತಿರದ ಕುಬೇರಾ ನಗರದಲ್ಲಿ ಗುರುವಾರ ರಾತ್ರಿ ನಡೆದಿದೆ.

Advertisement

ದಿನಾಲು ಕುಡಿದು ಪತ್ನಿಯೊಂದಿಗೆ ಜಗಳ ತೆಗೆಯುತ್ತಿದ್ದ. ಗುರುವಾರ ರಾತ್ರಿ ಎಂದಿನಂತೆ ಪತ್ನಿಯೊಂದಿಗೆ ಜಗಳ ತೆಗೆದಿದ್ದಲ್ಲದೇ ಮಾತಿಗೆ-ಮಾತು ಬೆಳೆದು ಹೊಡೆದು ಮನೆಯಲ್ಲಿದ್ದ ಗ್ಯಾಸ್‌ ಸಿಲೆಂಡರ್‌ ತಲೆ ಮೇಲೆ ಎತ್ತಿ ಹಾಕಿ ಧಾರುಣವಾಗಿ ಕೊಲೆ ಮಾಡಿ ಮೂವರು ಮಕ್ಕಳೊಂದಿಗೆ ಪರಾರಿಯಾಗಿದ್ದಾನೆ.

ಆರತಿ ತಾರಾಸಿಂಗ್‌ ರಾಠೊಡ (28) ಮಹಿಳೆ ಕೊಲೆಯಾದ ಗೃಹಿಣಿ. ಈಕೆಯ ಪತಿ ತಾರಾಸಿಂಗನೇ ಕೊಲೆ ಮಾಡಿದ ವ್ಯಕ್ತಿ. ತಾರಾಸಿಂಗ್‌ನ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.

ಘಟನೆ ವಿವರ

ಚಾಲಕನಾಗಿರುವ ತಾರಾಸಿಂಗ್‌ ಶಾಲೆಯ ವಿದ್ಯಾರ್ಥಿಗಳನ್ನು ವ್ಯಾನ್‌ದಲ್ಲಿ ಕರೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದ. ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೇ ಕುಬೇರಾ ನಗರದಲ್ಲಿ ಮನೆ ಬಾಡಿಗೆ ಹಿಡಿದಿದ್ದ. ತವರು ಮನೆಯಿಂದ ಹಣ ತರುವಂತೆ ಪತ್ನಿಯನ್ನು ಆಗಾಗ್ಗೆ ಪೀಡಿಸುತ್ತಿದ್ದ. ಆರತಿ ತಂದೆ ಸರ್ಕಾರಿ ನೌಕರರಾಗಿದ್ದರಿಂದ ಬ್ಯಾಂಕ್‌ನಲ್ಲಿ ಸಾಲ ಪಡೆದು ಮಗಳಿಗೆ ಹೌಸಿಂಗ್‌ ಬೋರ್ಡ್‌ನಲ್ಲಿ ಮನೆ ಕೊಡಿಸಿದ್ದರು. ಆದರೆ ತಾರಾಸಿಂಗ್‌ ಮನೆ ಕೊಡಿಸಿದರೆ ಸಾಲದು, ಮನೆ ತನ್ನ ಹೆಸರಿಗೆ ಇರಬೇಕೆಂದು ಜಗಳ ತೆಗೆಯುತ್ತಿದ್ದ. ಇದೇ ವಿಷಯಕ್ಕೆ ಜಗಳ ನಡೆದು ಕೊಲೆಯಲ್ಲಿ ಅಂತ್ಯವಾಗಿದೆ.

Advertisement

ಗುರುವಾರ ರಾತ್ರಿ ಕಳೆದಿದ್ದರೆ ಶುಕ್ರವಾರ ದಿನ ಸಂಕ್ರಾಂತಿ ಹಬ್ಬಕ್ಕೆಂದು ಆರತಿ ತವರು ಮನೆಗೆ ಹೊರಡುವವಳಿದ್ದಳು. ಆದರೆ ಪತಿ ತಾರಾಸಿಂಗ್‌ ಪತ್ನಿಯನ್ನು ಕೊಲೆ ಮಾಡಿ ಮಕ್ಕಳೊಂದಿಗೆ ಪರಾರಿಯಾಗಿದ್ದಾನೆ. ಆರತಿ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದ್ದು, ಕೊಲೆ ಮಾಡಿರುವ ತಾರಾಸಿಂಗ್‌ಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದಾರೆ.

ಡಿಸಿಪಿ ಅಡ್ಡೂರು ಶ್ರೀನಿವಾಸಲು, ಎಸಿಪಿ ಜೆ.ಎಚ್‌. ಇನಾಂದಾರ, ಗುಲ್ಬರ್ಗ ವಿವಿ ಠಾಣೆಯ ಇನ್ಸಪೆಕ್ಟರ್‌ ಶಿವಾನಂದ ಗಾಣಿಗೇರ್‌ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next