Advertisement

ಲೈಫ್‌ ಯೋಜನೆ: 72 ಮನೆಗಳ ಕೀಲಿಕೈ ವಿತರಣೆ

01:00 AM Mar 03, 2019 | Team Udayavani |

ಕಾಸರಗೋಡು: ಲೈಫ್‌ ಯೋಜನೆಯಲ್ಲಿ ಅಳವಡಿಸಿ ಚೆರುವತ್ತೂರು ಗ್ರಾಮ ಪಂಚಾಯತ್‌ನಲ್ಲಿ ನಿರ್ಮಿಸಿದ 27 ಮನೆಗಳ ಕೀಲಿಕೈ ವಿತರಣೆ ಸಮಾರಂಭ ನಡೆಯಿತು.

Advertisement

ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್‌ ಕೀಲಿಕೈ ವಿತರಣೆ ನಡೆಸಿದರು. ವಸತಿ ಇಲ್ಲದವರಿಗೆ ಮನೆ ನಿರ್ಮಿಸಿ ನೀಡುವ ಯೋಜನೆ ಪ್ರಕಾರ ಎರಡೂವರೆ ವರ್ಷ ಅವಧಿಯಲ್ಲಿ ಈ ಮನೆಗಳ ನಿರ್ಮಾಣ ನಡೆದಿದೆ.

ಈ ಸಂದರ್ಭ ಮಾತನಾಡಿದ ಸಚಿವ ರಾಜ್ಯ ಎಲ್ಲ ವಲಯಗಳಲ್ಲೂ ಬಲು ದೊಡ್ಡ ಬದಲಾವಣೆ ತರಲು ರಾಜ್ಯ ಸರಕಾರಕ್ಕೆ ಸಾಧ್ಯವಾಗಿದೆ ಎಂದು ಹೇಳಿದರು.

ಚೆರುವತ್ತೂರು ಗ್ರಾಮ ಪಂಚಾಯತ್‌ ಅಧ್ಯಕ್ಷ ಮಾಧವನ್‌ ಮಣಿಯರ ಅಧ್ಯಕ್ಷತೆ ವಹಿಸಿದ್ದರು. 
ಪ್ಲಾಸ್ಟಿಕ್‌ ನಿಂದ ಕ್ಯಾನ್ಸರ್‌ ಬರಬಹುದಾದ ಸಾಧ್ಯತೆಗಳ ಬಗ್ಗೆ ಪಂಚಾಯತ್‌ ವತಿಯಿಂದ ನಿರ್ಮಿಸಲಾದ 30 ನಿಮಿಷಗಳ ಅವಧಿಯ ಕಿರುಚಿತ್ರವನ್ನೂ ಸಚಿವ ಲೋಕಾರ್ಪಣೆ ನಡೆಸಿದರು. ಬೇರೆ ಬೇರೆ ಕ್ಷೇತ್ರಗಳ ಗಣ್ಯರಾದ ಯು. ಸುಮಿತ್ರಾ, ಕೆ.ವಿ. ಕುಂಞಿರಾಮನ್‌, ಮಾಧವಿ ಕೃಷ್ಣನ್‌, ಕೆ. ನಾರಾಯಣನ್‌, ಒ.ವಿ. ನಾರಾಯಣನ್‌, ಟಿ.ವಿ. ಪ್ರಭಾಕರನ್‌ ಮೊದಲಾದವರು ಉಪಸ್ಥಿತರಿದ್ದರು. ಪಂ. ಉಪಾಧ್ಯಕ್ಷೆ ಸಿ.ವಿ. ಪ್ರಮೀಳಾ ಸ್ವಾಗತಿಸಿದರು. ಎಂ. ಸುರೇಶ್‌ ಬಾಬು ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next