Advertisement

ಉಕ್ಕಿನ ನಿರ್ಧಾರದಿಂದ ಇಂದು ಜೀವನ ನೆಮ್ಮದಿ

11:19 AM Nov 01, 2018 | |

ಪುತ್ತೂರು: ಭಾರತದ ಅಖಂಡತೆಯ ಕಲ್ಪನೆ ಹೊತ್ತು ನಿಂತ ಧೀಮಂತ ವ್ಯಕ್ತಿ ಸರ್ದಾರ್‌ ವಲ್ಲಭಭಾಯಿ ಪಟೇಲ್‌. ಇಂದು ನಾವು ನೆಮ್ಮದಿಯ ಜೀವನ ನಡೆಸಲು ಅಂದು ಅವರು ಕೈಗೊಂಡ ಉಕ್ಕಿನ ನಿರ್ಧಾರಗಳೇ ಕಾರಣ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

Advertisement

ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ 143ನೇ ಜಯಂತಿ ಅಂಗವಾಗಿ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ರಾಷ್ಟ್ರೀಯ ಏಕತಾ ಓಟ ಸಂಚಾಲನ ಸಮಿತಿಯಿಂದ ಅ. 31ರಂದು ನಡೆದ ರಾಷ್ಟ್ರೀಯ ಏಕತಾ ಓಟದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ನಮ್ಮ ನೆಮ್ಮದಿಯ ಜೀವನಕ್ಕಾಗಿ ಶ್ರಮಿಸಿದ ಸರ್ದಾರ್‌ ಪಟೇಲರು ನಿತ್ಯ ನಿರಂತರ ನಮ್ಮ ಕಣ್ಣ ಮುಂದಿರಬೇಕು ಎನ್ನುವ ಉದ್ದೇಶದಿಂದ ಬೃಹತ್‌ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ರೈತರು, ಶ್ರಮ ಜೀವಿಗಳಿಂದ ಸಂಗ್ರಹಿಸಿದ ಕಬ್ಬಿಣ ಗಳಿಂದ ಅವರ ಪುತ್ಥಳಿಯನ್ನು ರಚಿಸಲಾಗಿದೆ ಎಂದರು.

ಪಟೇಲ್‌ ನೆನಪಿಗೆ ಏಕತಾ ಓಟ
ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಮಾತನಾಡಿ, ದೇಶದ ಏಕತೆಗೆ ಶ್ರಮಿಸಿದ ಸರ್ದಾರ್‌ ವಲ್ಲಭ ಬಾಯ್‌ ಪಟೇಲ್‌ ಅವರು ಯಾವುದೇ ಕ್ರಾಂತಿಯಿಲ್ಲದೆ ದೇಶವನ್ನು ಒಗ್ಗೂಡಿಸಿದ್ದಾರೆ. ದೇಶದ ಅಖಂಡತೆಗಾಗಿ ಅವರು ಸಲ್ಲಿಸಿದ ಸೇವೆಯನ್ನು ದೇಶದ ಪ್ರಜೆಗಳಿಗೆ ನೆನೆಪಿಸುವ ಉದ್ದೇಶದಿಂದ ಏಕತಾ ಓಟ ಆಯೋಜಿಸಲಾಗಿದೆ ಎಂದರು.

ಆಂಜನೇಯ ಮಂತ್ರಾಲಯದ ಬಳಿಯಿಂದ ಹೊರಟ ರಾಷ್ಟ್ರೀಯ ಏಕತಾ ಓಟಕ್ಕೆ ಕ್ಯಾಂಪ್ಕೋ ಅಧ್ಯಕ್ಷ ಎಸ್‌.ಆರ್‌. ಸತೀಶ್ಚಂದ್ರ ಅವರು ಧ್ವಜ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಮುಖ್ಯ ರಸ್ತೆಯ ಮೂಲಕ ಸಾಗಿ ದರ್ಬೆ ವೃತ್ತದ ಬಳಿ ಸಮಾಪನಗೊಂಡಿತು.

ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಸದಸ್ಯೆ ಶಯನಾ ಜಯಾನಂದ, ತಾ.ಪಂ. ಸದಸ್ಯ ಶಿವರಂಜನ್‌, ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ಮುಕುಂದ, ಹರೀಶ್‌ ಬಿಜತ್ರೆ, ಜಿ.ಪಂ. ಮಾಜಿ ಸದಸ್ಯ ಕೇಶವ ಗೌಡ ಬಜತ್ತೂರು, ನಗರಸಭೆ ಸದಸ್ಯರಾದ ಪಿ.ಜಿ. ಜಗನ್ನಿವಾಸ ರಾವ್‌, ಭಾಮಿ ಅಶೋಕ್‌ ಶೆಣೈ, ಪೂರ್ಣಿಮಾ, ವಿದ್ಯಾ ಗೌರಿ, ಮೋಹಿನಿ, ಇಂದಿರಾ ಪುರುಷೋತ್ತಮ, ಲೀಲಾವತಿ, ಮಮತಾ ರಂಜನ್‌, ದೀಕ್ಷಾ ಪೈ, ಗೌರಿ ಬನ್ನೂರು, ರೋಟರಿ ಕ್ಲಬ್‌ ಅಧ್ಯಕ್ಷ ವಾಮನ ಪೈ, ತಾ.ಪಂ. ಮಾಜಿ ಅಧ್ಯಕ್ಷ ಜಯಾನಂದ ಕೋಡಿಂಬಾಡಿ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಶಂಭು ಭಟ್‌, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಜೀವಂಧರ್‌ ಜೈನ್‌, ಕಾರ್ಯದರ್ಶಿ ರಾಮದಾಸ ಹಾರಾಡಿ, ಅನೀಶ್‌ ಬಡೆಕ್ಕಿಲ, ಪೂವಪ್ಪ ದೇಂತಡ್ಕ, ನವೀನ್‌ ಪಟ್ನೂರು, ಅಜಿತ್‌ ರೈ ಹೊಸಮನೆ, ರತ್ನಾಕರ ಪ್ರಭು, ರಾಮಚಂದ್ರ ಪೂಜಾರಿ ಉಪಸ್ಥಿತರಿದ್ದರು. ಹಾಗೆಯೇ ಪ್ರಗತಿ ಸ್ಟಡಿ ಸೆಂಟರ್‌ನ ವಿದ್ಯಾರ್ಥಿಗಳು, ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳು ಏಕತಾ ಓಟದಲ್ಲಿ ಪಾಲ್ಗೊಂಡಿದ್ದರು. ಯುವ ಮೋರ್ಚಾ ಅಧ್ಯಕ್ಷ ಸುನೀಲ್‌ ದಡ್ಡು ಸ್ವಾಗತಿಸಿದರು. ಉಪಾಧ್ಯಕ್ಷ ಸಂತೋಷ್‌ ರೈ ಕೈಕಾರ ನಿರೂಪಿಸಿ, ಕಾರ್ಯದರ್ಶಿ ಯುವರಾಜ ಪೆರಿಯತ್ತೋಡಿ ವಂದಿಸಿದರು.

Advertisement

ಅಖಂಡ ಭಾರತ ನಿರ್ಮಾಣ
560 ರಾಜ್ಯಗಳನ್ನು ಒಟ್ಟುಗೂಡಿಸಿ ಅಖಂಡ ಭಾರತ ನಿರ್ಮಾಣ ಮಾಡಿದ್ದಾರೆ. ಅವರ ಹುಟ್ಟುಹಬ್ಬ ದೇಶದ ಜನತೆಗೆ ಏಕತೆಯ ಸಂದೇಶ ನೀಡುವಂತಾಗಬೇಕು. ಉಕ್ಕಿನ ಮನಸ್ಸಿನ ವ್ಯಕ್ತಿಯಾಗಿರುವ ಪಟೇಲ್‌ ಉಕ್ಕಿನ ವ್ಯಕ್ತಿಯಾಗಿ ಜಗತ್ತಿಗೆ ಪರಿಚಯಿಸಲ್ಪಟ್ಟಿದ್ದಾರೆ. ದೇಶದ ಏಕತೆಗಾಗಿ ತನ್ನ ಸರ್ವಸ್ವವನ್ನು ಮುಡಿಪಾಗಿಟ್ಟವರು. ಸ್ವಾತಂತ್ರ್ಯ  ಹೋರಾಟದಲ್ಲಿ ಭಾಗವಹಿಸಿ, ಪ್ರಥಮ ಗೃಹ ಸಚಿವರಾಗಿ, ಉಪ ಪ್ರಧಾನಿ ಯಾಗಿ ದೇಶವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು ಎಂದು ಶಾಸಕರು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next