Advertisement

ಜೀವನಾಂಶ ವಿವಾದ: ವ್ಯಕ್ತಿಯ ಮೇಲೆ ತಂಡದಿಂದ ಹಲ್ಲೆ

11:51 AM Aug 14, 2018 | Team Udayavani |

ಕುಂದಾಪುರ: ಪತ್ನಿಗೆ ಜೀವನಾಂಶ ಮೊತ್ತ ಹೆಚ್ಚಿಸಲು ನಿರಾಕರಿಸಿದ  ವ್ಯಕ್ತಿಯ ಮೇಲೆ ತಂಡವೊಂದು ಹಲ್ಲೆ ನಡೆದಿದೆ.

Advertisement

ನಾಡ ಗ್ರಾಮದ ಗುಡ್ಡೆಯಂಗಡಿ ಅಮ್ಮುಂಜೆ ಸೆಡುRಳಿ ನಿವಾಸಿ ಉದಯ ಕುಮಾರ್‌ ಶೆಟ್ಟಿ ಹಾಗೂ ಪತ್ನಿ ಮಲ್ಲಿಕಾ ಶೆಟ್ಟಿ ಅವರ ದಾಂಪತ್ಯದಲ್ಲಿ ವಿರಸ ಉಂಟಾಗಿ ನ್ಯಾಯಾಲಯದಲ್ಲಿ ದಾವೆ ದಾಖಲಾಗಿತ್ತು. 

ನ್ಯಾಯಾಲಯದ ಆದೇಶದಂತೆ ಉದಯ ಕುಮಾರ್‌ ಶೆಟ್ಟಿ  ಅವರು ಪತ್ನಿ ಹಾಗೂ ಮಗುವಿಗೆ ತಿಂಗಳಿಗೆ 3,000 ರೂ.ಜೀವನಾಂಶ ನೀಡುತ್ತಾ ಬಂದಿದ್ದಾರೆ. ಈ ಮೊತ್ತ ಕಡಿಮೆ ಆಗುತ್ತಿದ್ದು, ಹೆಚ್ಚಿನ ಹಣ ಹಾಗೂ ಒಡವೆಯನ್ನು ಕೊಡಬೇಕು ಎಂದು ಪತ್ನಿ ಕೇಳಿದ್ದರು. 

ಇದಕ್ಕೆ ನಿರಾಕರಿಸಿದ ಉದಯ ಕುಮಾರ್‌ ಶೆಟ್ಟಿ ಮೇಲೆ ನಾಡ ಗ್ರಾಮದ ಕೋಣಿR ಕದ್ರಾ ಹಾಡಿಯಲ್ಲಿ ಆರೋಪಿಗಳಾದ ಸರ್ವೋತ್ತಮ ಶೆಟ್ಟಿ, ಆನಂದ ಶೆಟ್ಟಿ ಮತ್ತು ಇತರ 7 ಮಂದಿ ಎರಡು ಕಾರಿನಲ್ಲಿ ಬಂದು ಹಲ್ಲೆ ಮಾಡಿ, 3 ಪವನ್‌ ಚಿನ್ನದ ಸರ ಮತ್ತು ಆಮ್ನಿಯಲ್ಲಿದ್ದ 35 ಸಾ. ರೂ. ಹಣವನ್ನು ಕೊಂಡೊಯ್ದು  ಜೀವ ಬೆದರಿಕೆ ಹಾಕಿದ್ದಾರೆ ಎಂದು ಗಂಗೊಳ್ಳಿ  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next