Advertisement

ಬೆಂಗಳೂರು ಓಪನ್‌ ಟೆನಿಸ್‌: ಟೆನಿಸ್‌ ದಿಗ್ಗಜ ಪೇಸ್‌ ಜೋಡಿ ದ್ವಿತೀಯ ಸುತ್ತಿಗೆ

09:32 AM Feb 13, 2020 | keerthan |

ಬೆಂಗಳೂರು: ಉದ್ಯಾನನಗರಿಯ ಕೆಎಸ್‌ ಎಲ್‌ಟಿಎನಲ್ಲಿ ನಡೆಯುತ್ತಿರುವ ಬೆಂಗಳೂರು ಓಪನ್‌ ಎಟಿಪಿ ಟೆನಿಸ್‌ಕೂಟದಲ್ಲಿ ಭಾರತದ ಟೆನಿಸ್‌ ದಿಗ್ಗಜ ಲಿಯಾಂಡರ್‌ ಪೇಸ್‌ ಪುರುಷರ ಡಬಲ್ಸ್‌ ಪಂದ್ಯದ ಮೊದಲ ಸುತ್ತಿನಲ್ಲಿ ಗೆಲುವುಗಳಿಸಿ ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ.

Advertisement

ಬುಧವಾರ ನಡೆದ ಪಂದ್ಯದಲ್ಲಿ 18 ಬಾರಿಯ ಡಬಲ್ಸ್‌ ಗ್ರ್ಯಾನ್‌ಸ್ಲಾಮ್‌ ಚಾಂಪಿಯನ್‌, ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತ ಲಿಯಾಂಡರ್‌ ಪೇಸ್‌ ಬಹುತೇಕ ಭಾರತ ನೆಲದಲ್ಲಿ ಕೊನೆಯ ಪಂದ್ಯವನ್ನಾಡುತ್ತಿದ್ದಾರೆ. ಹೀಗಾಗಿ ಇವರ ಮೇಲೆ ಹೆಚ್ಚಿನ ನಿರೀಕ್ಷೆ ಇತ್ತು. ಇವರ ಆಟ ನೋಡುವುದಕ್ಕಾಗಿಯೇ ಅಭಿಮಾನಿಗಳು ಕೆಎಸ್‌ಎಲ್‌ಟಿಎಗೆ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ಆಸ್ಟ್ರೇಲಿಯಾದ ಮ್ಯಾಥ್ಯೂ ಅಬೆನ್‌ ಜತೆಗೂಡಿ ಡಬಲ್ಸ್‌ ಕಣಕ್ಕೆ ಇಳಿದ ಪೇಸ್‌ ಬಿರುಸಿನ ಆಟವಾಡಿದರು.

ಸ್ಲೊವೇನಿಯಾ ಬ್ಲಾಝ್ ರೊಲಾ ಹಾಗೂ ಚೀನಾದ ಝಿಝೆನ್‌ ಝಾಂಗ್‌
ಜೋಡಿಯನ್ನು 7-6(2), 6-4 ಸೆಟ್‌ಗಳ ಅಂತರದಿಂದ ಸೋಲಿಸಿದರು. ಮೊದಲ
ಸೆಟ್‌ನಲ್ಲಿ ಎದುರಾಗಳಿಂದ ಪ್ರಬಲ ಹೋರಾಟ ಎದುರಾದರೂ ಎರಡನೇ ಸೆಟ್‌ನಲ್ಲಿ ಪೇಸ್‌ ಜೋಡಿ ಸ್ವಲ್ಪ  ಸುಲಭವಾಗಿಯೇ ಗೆದ್ದು ಬಂದಿತು.

ಗುಣೇಶ್ವರನ್‌, ರಾಮ್‌ಕುಮಾರ್‌ ಕ್ವಾರ್ಟರ್‌ ಫೈನಲ್‌ಗೆ: ಹಾಲಿ ಚಾಂಪಿಯನ್‌ ಪ್ರಜ್ಞೆಶ್‌ ಗುಣೇಶ್ವರನ್‌ ಪುರುಷರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ಫೈನಲ್‌ಗೆ ಪ್ರವೇಶ ಪಡೆದಿದ್ದಾರೆ. ಅವರು 6-2, 4-6, 6-4 ಸೆಟ್‌ಗಳ ಅಂತರದಿಂದ ಜರ್ಮನಿಯ ತಾರಾ ಆಟಗಾರ ಸೆಬಾಸ್ಟಿಯನ್‌ ಫಾನ್ಸೆಲ್ವೊ ವಿರುದ್ಧ ಗೆಲುವುಗಳಿಸಿದರು. ಮೊದಲ ಸೆಟ್‌ನಲ್ಲಿ 1-0 ಮುನ್ನಡೆ ಪಡೆದ ಗುಣೇಶ್ವರನ್‌ಗೆ 2ನೇ ಸೆಟ್‌ನಲ್ಲಿ ಸೆಬಾಸ್ಟಿಯನ್‌ ಆಘಾತ ನೀಡಿದರು. ಹೀಗಾಗಿ ಸೆಟ್‌ 1-1ರಿಂದ ಸಮಗೊಂಡಿತು. ರೋಚಕವಾಗಿ ಸಾಗಿದ ಅಂತಿಮ ಸೆಟ್‌ನಲ್ಲಿ 6-4 ಅಂತರದಿಂದ ಸೆಬಾಸ್ಟಿಯನ್‌ಗೆ ಸೋಲುಣಿಸಿ 2-1 ಅಂತರದಿಂದ ಪಂದ್ಯ ವಶ ಪಡಿಸಿಕೊಂಡರು.

ಮತ್ತೂಂದು ಸಿಂಗಲ್ಸ್‌ ಪಂದ್ಯದಲ್ಲಿ ಭಾರತದ ರಾಮ್‌ ಕುಮಾರ್‌ ರಾಮನಾಥನ್‌ 6-1, 6-3 ಸೆಟ್‌ಗಳ ಅಂತರದಿಂದ ಭಾರತದವರೇಆದ ಅಭಿನವ್‌ ಷಣ್ಮುಗಂ ಅವರನ್ನು ಸೋಲಿಸಿ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದ್ದಾರೆ. ಮತ್ತೂಂದು ಸಿಂಗಲ್ಸ್‌ ಪಂದ್ಯದಲ್ಲಿ ಸಿದ್ಧಾರ್ಥ್ರಾ ವತ್‌ 6-2, 6-2 ಸೆಟ್‌ಗಳ ಅಂತರದಿಂದ ಭಾರತದವರೇ ಆದ ರಿಷಿ ರೆಡ್ಡಿ ಅವರನ್ನು ಸೋಲಿಸಿ ಕ್ವಾರ್ಟರ್‌ಫೈನಲ್‌ಗೆ ನೆಗೆದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next