Advertisement

ಇಂಥವರನ್ನು ಮಟ್ಟ ಹಾಕಿ: ಸಿ.ಟಿ.ರವಿ

11:18 PM Feb 16, 2020 | Team Udayavani |

ಶಿವಮೊಗ್ಗ: ಹುಬ್ಬಳ್ಳಿಯಲ್ಲಿ ಪಾಕ್‌ ಪರ ಘೋಷಣೆ ಕೂಗಿದವರನ್ನು ಮಟ್ಟ ಹಾಕಬೇಕು. ಬೇರಿನಲ್ಲೇ ಇಂಥವರನ್ನು ಚಿವುಟಬೇಕು ಎಂದು ಸಚಿವ ಸಿ.ಟಿ.ರವಿ ಹೇಳಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ್ರೋಹಿಗಳಿಗೆ ತಕ್ಕ ಶಾಸ್ತಿಯಾಗಲೇಬೇಕು. ಇಂತಹ ಮನೋಭಾವ ಬೆಳೆದಿದ್ದಾದರೂ ಎಲ್ಲಿಂದ ಎಂದು ಸಮಾಜ ಚಿಂತನೆ ಮಾಡಬೇಕಾದ ಅವಶ್ಯಕತೆ ಇದೆ.

Advertisement

ಯಾರೋ ಇಬ್ಬರು ದೇಶದ್ರೋಹಿಗಳು ಘೋಷಣೆ ಕೂಗಿದ್ದಾರೆ ಎಂದು ಸುಮ್ಮನಿದ್ದರೆ ಅಪಾಯ ತಪ್ಪಿದ್ದಲ್ಲ. ತಾಲಿಬಾನ್‌ ಸಂಸ್ಕೃತಿ ಹುಟ್ಟುವುದೇ ಇಂತಹ ಜನರಿಂದ. ಇದಕ್ಕೆ ಕಾರಣರಾದವರು, ಇದರ ಹಿಂದಿರುವ ಶಕ್ತಿಯನ್ನು ಗುರುತಿಸಿ ಕ್ರಮ ಕೈಗೊಳ್ಳಬೇಕಾದದ್ದು ತೀರಾ ಅವಶ್ಯ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next