Advertisement

ಗೆಜೆಟ್‌ ಅಧಿಸೂಚನೆಗೆ 25ರಿಂದ ಪತ್ರ ಚಳವಳಿ

11:03 PM Sep 23, 2019 | Team Udayavani |

ಹುಬ್ಬಳ್ಳಿ: ಮಹದಾಯಿ ವಿಚಾರದಲ್ಲಿ ರಾಜ್ಯಪಾಲರು ಮಧ್ಯಪ್ರವೇಶಿಸಿ, ನ್ಯಾಯಾಧಿಕರಣದ ತೀರ್ಪು ಪ್ರಕಾರ ರಾಜ್ಯಕ್ಕೆ ಕುಡಿವ ನೀರು ಬಳಕೆ ಮಾಡಲು ಗೆಜೆಟ್‌ ನೋಟಿಫಿ ಕೇಶನ್‌ ಹೊರಡಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಬೇಕೆಂದು ಆಗ್ರಹಿಸಿ ಸೆ.25ರಿಂದ ಅ.16ರ ವರೆಗೆ ರೈತ ಸೇನಾ ಕರ್ನಾಟಕ ವತಿಯಿಂದ ಪತ್ರ ಚಳವಳಿ ಹಮ್ಮಿಕೊಳ್ಳಲಾಗಿದೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತ ಸೇನಾ ಕರ್ನಾಟಕ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಸ್ವಾಮೀಜಿ, ಮಹದಾಯಿ ನೀರನ್ನು ನ್ಯಾಯಾಧಿಕರಣದ ತೀರ್ಪಿನಂತೆ ನಮಗೆ ಕೊಡುವಂತೆ ಆಗ್ರಹಿಸಿ 25ರಂದು ಬೆಳಗ್ಗೆ 11 ಗಂಟೆಗೆ ಮೂರುಸಾವಿರ ಮಠ ಆವರಣ ದಲ್ಲಿ ರಾಜ್ಯಪಾಲರಿಗೆ ಪತ್ರ ಚಳವಳಿ ಹಮ್ಮಿಕೊ ಳ್ಳಲಾಗಿದೆ. ಅಂದಾಜು 1 ಲಕ್ಷ ಪತ್ರಗಳನ್ನು ರಾಜ್ಯಪಾಲರಿಗೆ ಕಳುಹಿ ಸುವ ಗುರಿಯಿದೆ. ಅ.17ರಂದು ರಾಜ್ಯ ಪಾಲ ರನ್ನು ಭೇಟಿ ಮಾಡಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next